ವಹಿವಾಟಿಗೆ ಪೂರ್ಣ ಪ್ರಮಾಣದಲ್ಲಿ ಲಾಕ್ಡೌನ್ ತೆರವಿನ ಬಳಿಕ ಬಂದಿರುವ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಗೆ ಗುರುವಾರ ಮಣ್ಣಿನ ಎತ್ತುಗಳು, ಹೂವು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಿ, ವ್ಯಾಪಾರದ ಸಮಯ ವಿಸ್ತರಣೆ ಮಾಡಿದಂತೆಲ್ಲ ಜನರ ಓಡಾಟ, ಖರೀದಿ ಹೆಚ್ಚುತ್ತಿದೆ. ವಾಣಿಜ್ಯ ನಗರಿಯ ಪ್ರಮುಖ ಮಾರುಕಟ್ಟೆ ದುರ್ಗದ ಬೈಲ್ ಮತ್ತು ಶಹ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಬಟ್ಟೆಗಳ ಖರೀದಿ ಹೆಚ್ಚಾಗಿತ್ತು.