ಈ ಕುರಿತು ಮಂಗಳವಾರ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಂಗಿ, ‘2018ರ ಫೆಬ್ರುವರಿಯಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರನ್ನು ಭೇಟಿಯಾಗಿದ್ದೆವು. ಶೀಘ್ರವೇ ಪ್ರವೇಶ ದ್ವಾರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಪ್ರವೇಶ ದ್ವಾರ ಆರಂಭವಾದರೆ ದೇಶಪಾಂಡೆ ನಗರ, ಕೇಶ್ವಾಪುರ, ವಿಜಯನಗರ, ವಿಶ್ವೇಶ್ವರ ನಗರ, ಕುಸುಗಲ್ ರಸ್ತೆ, ಗದಗ ರಸ್ತೆಯ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದರು.