ಅಗತ್ಯ ದಿನಸಿಗಳನ್ನು ಮಾರಾಟ ಮಾಡಲು ಮಧ್ಯಾಹ್ನ 12 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಜನತಾ ಬಜಾರ್, ಶಿರೂರು ಪಾರ್ಕ್, ದುರ್ಗದ ಬೈಲ್ನಲ್ಲಿ ಕಿರಾಣಿ ಅಂಗಡಿಗಳ ಮುಂದೆ ಜನ ಅಂತರ ಮರೆತು ನಿಂತಿದ್ದರು. ದುರ್ಗದ ಬೈಲ್ನ ಹೂವಿನ ಮಾರುಕಟ್ಟೆ, ಶಹಬಜಾರ್, ಗೌಳಿ ಗಲ್ಲಿಯ ಹಿರೇಪೇಟ ಮುಖ್ಯ ರಸ್ತೆ ಮತ್ತು ಹಳೇ ಹುಬ್ಬಳ್ಳಿಯ ತರಕಾರಿ ಮಾರುಕಟ್ಟೆಯಲ್ಲಿ ಜನರ ನಡುವೆ ಅಂತರ ಕಂಡು ಬರಲಿಲ್ಲ.