ಹಿಂದೆ ಕಟ್ಟಿಗೆ ಡಿಪೊ ಆಗಿದ್ದ ಈ ತಾಣ ಇದೀಗ ಉದ್ಯಾನವಾಗಿ ಬದಲಾಗಿದೆ. ಅಳ್ನಾವರ ಭಾಗದ ಮರಗಳನ್ನು ಸಾಗಿಸಲು ರೈಲು ಹಳಿಯ ಬಳಿಯೇ ಈ ಡಿಪೊ ಇತ್ತು. ಆದರೆ ಅರಣ್ಯ ಇಲಾಖೆಯು ಡಿಪೊವನ್ನು ಸರ್ಕಾರ ರದ್ದು ಮಾಡಿದ ನಂತರ, ಈ ಜಾಗ ಪಾಳು ಬಿದ್ದಿತ್ತು. ಹಳಿಯಾಳ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೆ ಹಸಿರು ಸ್ಪರ್ಶ ನೀಡಿದ್ದಾರೆ.