‘ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು. ಆದರೆ ಈ ಕುರಿತೇ ಜನರಲ್ಲಿ ಅನುಮಾನವಿದೆ. ರಾಜ್ಯ ಭೌಗೋಳಿಕವಾಗಿ ಅಭಿವೃದ್ಧಿಯಾದರೆ ಸಾಲದು. ಜನಾಂಗೀಯವಾಗಿಯೂ ಅಭಿವೃದ್ಧಿ ಕಾಣಬೇಕು. ಸಚಿವ ಉಮೇಶ ಕತ್ತಿ ಅವರು ಉತ್ತರ ಕರ್ನಾಟಕ ರಾಜ್ಯ ರಚನೆ ಕುರಿತು ಮಾತನಾಡಿದರೆ ಅದನ್ನು ಕೆಲವರು ಹಗುರವಾಗಿ ಸ್ವೀಕರಿಸುತ್ತಾರೆ. ಆದರೆ ಒಂದೊಮ್ಮೆ ಅಂಥ ವಿಭಜನೆ ಕಾಲ ಬಂದಲ್ಲಿ, ಅದನ್ನು ಅನಿವಾರ್ಯವಾಗಿ ಸ್ವೀಕರಿಸಲೇಬೇಕಬಹುದು’ ಎಂದರು.