‘ನಿರ್ಜಲೀಕರಣದಿಂದಾಗಿ ಮಾರ್ಚ್ 14ರಂದು ಇದ್ದಕ್ಕಿದ್ದಂತೆ ತಂದೆ ಅಸ್ವಸ್ಥರಾದರು. ವೈದ್ಯರನ್ನು ಸಂಪರ್ಕಿಸಿದಾಗ, ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಬಳಿಕ, ಕಿಮ್ಸ್ಗೆ ಕರೆ ತರಲಾಯಿತು. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿದ್ದು, ಸದ್ಯ ಆರಾಮವಾಗಿದ್ದಾರೆ. ಸಂಜೆ ಮನೆಗೆ ಕರೆದೊಯ್ಯಲಾಗುವುದು’ ಎಂದು ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.