ಹುಬ್ಬಳ್ಳಿ: ವೀರ ಸೇನಾನಿ ಸಿಂಧೂರ ಲಕ್ಷ್ಮಣ ಜಯಂತಿಯನ್ನು ವಿವಿಧ ಸಂಘಟನೆಗಳು ಮಂಗಳವಾರ ನಗರದಲ್ಲಿ ಸರಳವಾಗಿ ಆಚರಿಸಿದವು.
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಗೋಕುಲ ರಸ್ತೆಯಲ್ಲಿರುವ ಲಕ್ಷ್ಮಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಸಮತಾ ಸೇನಾ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಹಾಗೂ ಪ್ರಗತಿಪರ ವೇದಿಕೆಗಳ ಪದಾಧಿಕಾರಿಗಳು ಸಹ ಸರಳವಾಗಿ ಜಯಂತಿಯನ್ನು ಆಚರಿಸಿದವು. ಲಕ್ಷ್ಮಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಾತಂತ್ರ್ಯ ಸೇನಾನಿಯ ಸಾಹಸವನ್ನು ಕೊಂಡಾಡಿದವು.
ಸೇನಾದ ಗುರುನಾಥ ಉಳ್ಳಿಕಾಶಿ, ಡಾ. ತ್ಯಾಗರಾಜ, ಡಾ, ಚೌಹಾಣ, ಪ್ರೊ.ಬಡಿಗೇರ, ಯಲ್ಲಪ್ಪ ಬಾಗಲಕೋಟಿ, ರೈಸ್ ಖೋಜೆ, ಹನಮಂತ ತಳವಾರ ಹಾಗೂ ಲೋಹಿತ ಗಾಮನಗಟ್ಟಿ ಇದ್ದರು.