<p><strong>ಧಾರವಾಡ:</strong> ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರು ರಚಿಸಿದ ರಾಷ್ಟ್ರಗೀತೆಗೆ ಈಗ 105 ವರ್ಷಗಳ ಸಂಭ್ರಮ. ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ, ಪೇಡಾ ನಗರಿ ಎಂದೇ ಕರೆಯಲ್ಪಡುವ ಧಾರವಾಡದ ರೈಲು ನಿಲ್ದಾಣಕ್ಕೆ ಟ್ಯಾಗೋರ್ ಅವರು ಭೇಟಿ ನೀಡಿದ್ದರು ಎಂಬುದು ವಿಶೇಷ.</p><p>1922ರಲ್ಲಿ ಶ್ರೀಲಂಕಾ ದೇಶಕ್ಕೆ ಪ್ರವಾಸ ಹೊರಟಿದ್ದ ರವೀಂದ್ರನಾಥ ಟ್ಯಾಗೋರ್ ಮತ್ತು ಸಿ.ಎಸ್. ಎಂಡ್ರೊ ಜದ್ರಾ ಎಂಬುವರು ಪುಣೆ ಮತ್ತು ಬೆಂಗಳೂರು ಮಾರ್ಗವಾಗಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಆಗ ಧಾರವಾಡ ರೈಲು ನಿಲ್ದಾಣದಲ್ಲಿ ಅವರಿಬ್ಬರೂ 5 ನಿಮಿಷ ಇರುತ್ತಾರೆ ಎಂಬ ವಿಷಯ ವರಕವಿ ದ.ರಾ. ಬೇಂದ್ರೆ ಮತ್ತು ಇತರ ಗಣ್ಯರಿಗೆ ಗೊತ್ತಾಯಿತು. ಎಲ್ಲರೂ ತಕ್ಷಣವೇ ನಿಲ್ದಾಣಕ್ಕೆ ಬಂದರು.</p><p>ಸುಮಾರು ಐದು ಸಾವಿರ ಕವಿತೆ ರಚಿಸಿ ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರವೀಂದ್ರನಾಥ್ ಟ್ಯಾಗೋರ್ ಅವರನ್ನು ದ.ರಾ. ಬೇಂದ್ರೆ ಹಾಗೂ ಸಂಗಡಿಗರು ಗೌರವಿಸಿ, ಒಂದಿಷ್ಟು ಸಮಯ ಅವರೊಡನೆ ಮಾತುಕತೆ ನಡೆಸಿದರು ಎಂದು ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಪುಸ್ತಕದಲ್ಲಿ ಉಲ್ಲೇಖವಿದೆ.</p><p>ರವೀಂದ್ರನಾಥ ಟ್ಯಾಗೋರ್ ಅವರು ಧಾರವಾಡ ಭೇಟಿಯ ಸವಿನೆನಪಿಗಾಗಿ 1989ರ ಆಗಸ್ಟ್ 8ರಂದು ರೈಲ್ವೆ ಇಲಾಖೆಯಿಂದ ರೈಲ್ವೆ ಪ್ಲಾಟ್ಪಾರ್ಮ್ನ ಒಂದು ಮೂಲೆಯಲ್ಲಿ ಟ್ಯಾಗೋರ್ ಅವರ ಪುತ್ಥಳಿ ಸ್ಥಾಪಿಸಿ, ಉದ್ಯಾನ ನಿರ್ಮಿಸಲಾಗಿದೆ. ಅದಕ್ಕೆ ‘ಗುರುದೇವ ಸ್ಮಾರಕ’ ಎಂದು ನಾಮಕರಣ ಮಾಡಲಾಗಿದೆ.</p><p><strong>ರಾಷ್ಟ್ರಗೀತೆಗೆ ಶತಮಾನದ ಇತಿಹಾಸ</strong></p><p>ರವೀಂದ್ರನಾಥ ಟ್ಯಾಗೋರ್ ಅವರು ಬರೆದ ರಾಷ್ಟ್ರಗೀತೆ ಮೂಲತಃ ಸಂಸ್ಕೃತ ಮತ್ತು ಬಂಗಾಳಿ ಭಾಷೆಯಿಂದ ಕೂಡಿದೆ. ದೇಶದಲ್ಲಿ ಈ ಗೀತೆಯನ್ನು 1911ರಂದು ಕೋಲ್ಕತ್ತ ನಗರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಸ್ತುತ ಪಡಿಸಲಾಯಿತು. ಇದೀಗ ರಾಷ್ಟ್ರಗೀತೆ ರಚನೆಯಾಗಿ ಶತಮಾನವಾಗಿದೆ.</p><p>ಆಗ ಈ ಗೀತೆಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಲಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸಂಗೀತಗಾರ ರಾಮಸಿಂಗ್ ಠಾಕೂರ್ ಸಂಯೋಜನದಲ್ಲಿ 1950ರ ಜನವರಿ 24ರಂದು ಈ ಗೀತೆಯನ್ನು ರಾಷ್ಟ್ರಗೀತೆ ಎಂದು ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರು ರಚಿಸಿದ ರಾಷ್ಟ್ರಗೀತೆಗೆ ಈಗ 105 ವರ್ಷಗಳ ಸಂಭ್ರಮ. ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ, ಪೇಡಾ ನಗರಿ ಎಂದೇ ಕರೆಯಲ್ಪಡುವ ಧಾರವಾಡದ ರೈಲು ನಿಲ್ದಾಣಕ್ಕೆ ಟ್ಯಾಗೋರ್ ಅವರು ಭೇಟಿ ನೀಡಿದ್ದರು ಎಂಬುದು ವಿಶೇಷ.</p><p>1922ರಲ್ಲಿ ಶ್ರೀಲಂಕಾ ದೇಶಕ್ಕೆ ಪ್ರವಾಸ ಹೊರಟಿದ್ದ ರವೀಂದ್ರನಾಥ ಟ್ಯಾಗೋರ್ ಮತ್ತು ಸಿ.ಎಸ್. ಎಂಡ್ರೊ ಜದ್ರಾ ಎಂಬುವರು ಪುಣೆ ಮತ್ತು ಬೆಂಗಳೂರು ಮಾರ್ಗವಾಗಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಆಗ ಧಾರವಾಡ ರೈಲು ನಿಲ್ದಾಣದಲ್ಲಿ ಅವರಿಬ್ಬರೂ 5 ನಿಮಿಷ ಇರುತ್ತಾರೆ ಎಂಬ ವಿಷಯ ವರಕವಿ ದ.ರಾ. ಬೇಂದ್ರೆ ಮತ್ತು ಇತರ ಗಣ್ಯರಿಗೆ ಗೊತ್ತಾಯಿತು. ಎಲ್ಲರೂ ತಕ್ಷಣವೇ ನಿಲ್ದಾಣಕ್ಕೆ ಬಂದರು.</p><p>ಸುಮಾರು ಐದು ಸಾವಿರ ಕವಿತೆ ರಚಿಸಿ ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರವೀಂದ್ರನಾಥ್ ಟ್ಯಾಗೋರ್ ಅವರನ್ನು ದ.ರಾ. ಬೇಂದ್ರೆ ಹಾಗೂ ಸಂಗಡಿಗರು ಗೌರವಿಸಿ, ಒಂದಿಷ್ಟು ಸಮಯ ಅವರೊಡನೆ ಮಾತುಕತೆ ನಡೆಸಿದರು ಎಂದು ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಪುಸ್ತಕದಲ್ಲಿ ಉಲ್ಲೇಖವಿದೆ.</p><p>ರವೀಂದ್ರನಾಥ ಟ್ಯಾಗೋರ್ ಅವರು ಧಾರವಾಡ ಭೇಟಿಯ ಸವಿನೆನಪಿಗಾಗಿ 1989ರ ಆಗಸ್ಟ್ 8ರಂದು ರೈಲ್ವೆ ಇಲಾಖೆಯಿಂದ ರೈಲ್ವೆ ಪ್ಲಾಟ್ಪಾರ್ಮ್ನ ಒಂದು ಮೂಲೆಯಲ್ಲಿ ಟ್ಯಾಗೋರ್ ಅವರ ಪುತ್ಥಳಿ ಸ್ಥಾಪಿಸಿ, ಉದ್ಯಾನ ನಿರ್ಮಿಸಲಾಗಿದೆ. ಅದಕ್ಕೆ ‘ಗುರುದೇವ ಸ್ಮಾರಕ’ ಎಂದು ನಾಮಕರಣ ಮಾಡಲಾಗಿದೆ.</p><p><strong>ರಾಷ್ಟ್ರಗೀತೆಗೆ ಶತಮಾನದ ಇತಿಹಾಸ</strong></p><p>ರವೀಂದ್ರನಾಥ ಟ್ಯಾಗೋರ್ ಅವರು ಬರೆದ ರಾಷ್ಟ್ರಗೀತೆ ಮೂಲತಃ ಸಂಸ್ಕೃತ ಮತ್ತು ಬಂಗಾಳಿ ಭಾಷೆಯಿಂದ ಕೂಡಿದೆ. ದೇಶದಲ್ಲಿ ಈ ಗೀತೆಯನ್ನು 1911ರಂದು ಕೋಲ್ಕತ್ತ ನಗರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಸ್ತುತ ಪಡಿಸಲಾಯಿತು. ಇದೀಗ ರಾಷ್ಟ್ರಗೀತೆ ರಚನೆಯಾಗಿ ಶತಮಾನವಾಗಿದೆ.</p><p>ಆಗ ಈ ಗೀತೆಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಲಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸಂಗೀತಗಾರ ರಾಮಸಿಂಗ್ ಠಾಕೂರ್ ಸಂಯೋಜನದಲ್ಲಿ 1950ರ ಜನವರಿ 24ರಂದು ಈ ಗೀತೆಯನ್ನು ರಾಷ್ಟ್ರಗೀತೆ ಎಂದು ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>