<p><strong>ಹುಬ್ಬಳ್ಳಿ: </strong>‘ಹಳೆಯ ಸಾಂಪ್ರದಾಯಿಕ ಮೌಲ್ಯಗಳ ವಿರುದ್ಧ ಹೋರಾಡಿ, ಬದುಕಿನ ವಾಸ್ತವತೆ ಚಿತ್ರಿಸುವುದೇ ಸಾಹಿತ್ಯ. ಇದೇ ತರಾಸು ಅವರ ಕಾದಂಬರಿಗಳ ತಿರುಳಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ದುಷ್ಯಂತ ನಾಡಗೌಡ ತಿಳಿಸಿದರು.</p>.<p>ನಗರದ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಾಸು ಅಭಿಮಾನಿಗಳ ಬಳಗದಿಂದ ಶನಿವಾರ ಆಯೋಜಿಸಿದ್ದ ತರಾಸು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗಳಗನಾಥರಂತೆ ವಾಚನಾಭಿರುಚಿ ಹುಟ್ಟಿಸಿದವರು ತರಾಸು. ತಮ್ಮ ಕಾದಂಬರಿಗಳ ಮೂಲಕ ಜಾತಿ ವ್ಯವಸ್ಥೆ, ಶಾಸ್ತ್ರ ಪದ್ಧತಿಯನ್ನು ಪ್ರಶ್ನಿಸಿದರು. ಸ್ತ್ರೀ ಸ್ವಾತಂತ್ರ್ಯ, ಸಂಬಂಧಗಳ ಮೌಲ್ಯ, ಸತ್ಯ, ಆತ್ಮವಿಮರ್ಶೆಯ ಮಹತ್ವ ಸಾರಿದರು. ಸತ್ಯಕ್ಕೆ ಮನ್ನಣೆ ನೀಡದಿದ್ದರೆ ಅದು ಸತ್ತು ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು’ ಎಂದರು.</p>.<p><strong>‘ಮಾನವೀಯತೆಯೇ ಮಹತ್ತರ</strong><br />ವಾದ ಮೌಲ್ಯ ಎಂದು ಒಪ್ಪಿಕೊಂಡಾದ ಇತರ ಮೌಲ್ಯಗಳನ್ನು ವಿರೋಧಿಸಬೇಕಾ<br />ಗುತ್ತದೆ. ಸಮಕಾಲೀನ ಸಾಹಿತ್ಯದಲ್ಲಿ ಇದನ್ನು ಪ್ರತಿಪಾದಿಸಿದ ತರಾಸು, ಭಾಷೆಯ ಚೆಲುವಿಗೂ ಆದ್ಯತೆ ನೀಡಿದ್ದಾರೆ. ಸುಂದರ ಘಟನಾವಳಿಗಳಿ<br />ರುವ ಅವರ ಕಾದಂಬರಿಗಳು ಸಂತೋಷ ನೀಡುವಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ’ ಎಂದು ಹೇಳಿದರು.</p>.<p>ಹುಲಕೋಟಿಯ ಕನ್ನಡ ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ ಮಾತನಾಡಿ, ‘ಸ್ತ್ರೀಯರು ಕಾದಂಬರಿ ಓದಿದರೆ ಅಡ್ಡದಾರಿ ಹಿಡಿಯುತ್ತಾರೆ ಎನ್ನುತ್ತಿದ್ದ ಕಾಲಘಟ್ಟದಲ್ಲಿ ಧೈರ್ಯವಾಗಿ ಓದುವಂತೆ ತರಾಸು ಕಾದಂಬರಿಗಳು ಪ್ರೇರೇಪಿಸಿ<br />ದವು. ಬರೆದೇ ಬದುಕುವೆ ಎನ್ನುತ್ತಿದ್ದ ಅವರು ಬರೆದಂತೆ ಬದುಕಿದರು. ಟೀಕಿಸಿದವರಿಂದಲೆ ಸನ್ಮಾನ ಮಾಡಿಸಿಕೊಂಡರು. ಪ್ರಗತಿಶೀಲ ಸಾಹಿತ್ಯ ಪಂಥ ಬೇಗನೆ ಕರಗಿಹೋದಂತೆ, ಬರಹಗಾರರೂ ಮರೆಯಾದರು. ತರಾಸು ಕುರಿತ ಉಪನ್ಯಾಸ ಕಾರ್ಯಕ್ರಗಳು ಹೆಚ್ಚಾಗಿ ನಡೆದಿರುವುದು ವಿಷಾದನೀಯ’ ಎಂದರು.</p>.<p>ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಂತಾ ನಾಡಿಗೇರ ಅವರಿಗೆ ₹5,001, ಪದ್ಮಜಾ ಉಮರ್ಜಿ (ದ್ವಿತೀಯ) ಅವರಿಗೆ ₹3,001, ಕೆ.ಎನ್. ಶಶಿಧರ (ತೃತೀಯ) ಅವರಿಗೆ ₹2,001, ಬಸವರಾಜ ಹರಿಹರ ಹಾಗೂ ಶೀಲಾ ಎ. ಅವರಿಗೆ ತಲಾ ₹1,001 ನಗದು ಬಹುಮಾನ ನೀಡಲಾಯಿತು.</p>.<p>ಪ್ರೊ. ಮಹೇಶ ದ್ಯಾವಪ್ಪನವರ, ಪ್ರೊ. ಎಸ್.ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬಳಗದ ಉಪಾಧ್ಯಕ್ಷ ಲಿಂಗರಾಜ ಅಂಗಡಿ, ಕಾರ್ಯಾಧ್ಯಕ್ಷ ಕೆ.ಎಸ್. ಕೌಜಲಗಿ, ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಸಿ. ಮುಳ್ಳಳ್ಳಿ, ಬಿ.ಎಸ್. ಮಾಳವಾಡ, ಕವಿತಾ ಕಲಕಬಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>‘ಹಳೆಯ ಸಾಂಪ್ರದಾಯಿಕ ಮೌಲ್ಯಗಳ ವಿರುದ್ಧ ಹೋರಾಡಿ, ಬದುಕಿನ ವಾಸ್ತವತೆ ಚಿತ್ರಿಸುವುದೇ ಸಾಹಿತ್ಯ. ಇದೇ ತರಾಸು ಅವರ ಕಾದಂಬರಿಗಳ ತಿರುಳಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ದುಷ್ಯಂತ ನಾಡಗೌಡ ತಿಳಿಸಿದರು.</p>.<p>ನಗರದ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಾಸು ಅಭಿಮಾನಿಗಳ ಬಳಗದಿಂದ ಶನಿವಾರ ಆಯೋಜಿಸಿದ್ದ ತರಾಸು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗಳಗನಾಥರಂತೆ ವಾಚನಾಭಿರುಚಿ ಹುಟ್ಟಿಸಿದವರು ತರಾಸು. ತಮ್ಮ ಕಾದಂಬರಿಗಳ ಮೂಲಕ ಜಾತಿ ವ್ಯವಸ್ಥೆ, ಶಾಸ್ತ್ರ ಪದ್ಧತಿಯನ್ನು ಪ್ರಶ್ನಿಸಿದರು. ಸ್ತ್ರೀ ಸ್ವಾತಂತ್ರ್ಯ, ಸಂಬಂಧಗಳ ಮೌಲ್ಯ, ಸತ್ಯ, ಆತ್ಮವಿಮರ್ಶೆಯ ಮಹತ್ವ ಸಾರಿದರು. ಸತ್ಯಕ್ಕೆ ಮನ್ನಣೆ ನೀಡದಿದ್ದರೆ ಅದು ಸತ್ತು ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು’ ಎಂದರು.</p>.<p><strong>‘ಮಾನವೀಯತೆಯೇ ಮಹತ್ತರ</strong><br />ವಾದ ಮೌಲ್ಯ ಎಂದು ಒಪ್ಪಿಕೊಂಡಾದ ಇತರ ಮೌಲ್ಯಗಳನ್ನು ವಿರೋಧಿಸಬೇಕಾ<br />ಗುತ್ತದೆ. ಸಮಕಾಲೀನ ಸಾಹಿತ್ಯದಲ್ಲಿ ಇದನ್ನು ಪ್ರತಿಪಾದಿಸಿದ ತರಾಸು, ಭಾಷೆಯ ಚೆಲುವಿಗೂ ಆದ್ಯತೆ ನೀಡಿದ್ದಾರೆ. ಸುಂದರ ಘಟನಾವಳಿಗಳಿ<br />ರುವ ಅವರ ಕಾದಂಬರಿಗಳು ಸಂತೋಷ ನೀಡುವಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ’ ಎಂದು ಹೇಳಿದರು.</p>.<p>ಹುಲಕೋಟಿಯ ಕನ್ನಡ ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ ಮಾತನಾಡಿ, ‘ಸ್ತ್ರೀಯರು ಕಾದಂಬರಿ ಓದಿದರೆ ಅಡ್ಡದಾರಿ ಹಿಡಿಯುತ್ತಾರೆ ಎನ್ನುತ್ತಿದ್ದ ಕಾಲಘಟ್ಟದಲ್ಲಿ ಧೈರ್ಯವಾಗಿ ಓದುವಂತೆ ತರಾಸು ಕಾದಂಬರಿಗಳು ಪ್ರೇರೇಪಿಸಿ<br />ದವು. ಬರೆದೇ ಬದುಕುವೆ ಎನ್ನುತ್ತಿದ್ದ ಅವರು ಬರೆದಂತೆ ಬದುಕಿದರು. ಟೀಕಿಸಿದವರಿಂದಲೆ ಸನ್ಮಾನ ಮಾಡಿಸಿಕೊಂಡರು. ಪ್ರಗತಿಶೀಲ ಸಾಹಿತ್ಯ ಪಂಥ ಬೇಗನೆ ಕರಗಿಹೋದಂತೆ, ಬರಹಗಾರರೂ ಮರೆಯಾದರು. ತರಾಸು ಕುರಿತ ಉಪನ್ಯಾಸ ಕಾರ್ಯಕ್ರಗಳು ಹೆಚ್ಚಾಗಿ ನಡೆದಿರುವುದು ವಿಷಾದನೀಯ’ ಎಂದರು.</p>.<p>ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಂತಾ ನಾಡಿಗೇರ ಅವರಿಗೆ ₹5,001, ಪದ್ಮಜಾ ಉಮರ್ಜಿ (ದ್ವಿತೀಯ) ಅವರಿಗೆ ₹3,001, ಕೆ.ಎನ್. ಶಶಿಧರ (ತೃತೀಯ) ಅವರಿಗೆ ₹2,001, ಬಸವರಾಜ ಹರಿಹರ ಹಾಗೂ ಶೀಲಾ ಎ. ಅವರಿಗೆ ತಲಾ ₹1,001 ನಗದು ಬಹುಮಾನ ನೀಡಲಾಯಿತು.</p>.<p>ಪ್ರೊ. ಮಹೇಶ ದ್ಯಾವಪ್ಪನವರ, ಪ್ರೊ. ಎಸ್.ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬಳಗದ ಉಪಾಧ್ಯಕ್ಷ ಲಿಂಗರಾಜ ಅಂಗಡಿ, ಕಾರ್ಯಾಧ್ಯಕ್ಷ ಕೆ.ಎಸ್. ಕೌಜಲಗಿ, ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಸಿ. ಮುಳ್ಳಳ್ಳಿ, ಬಿ.ಎಸ್. ಮಾಳವಾಡ, ಕವಿತಾ ಕಲಕಬಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>