’ದೇಶದಾದ್ಯಂತ 15ರಿಂದ ಫೆ. 27ರ ತನಕ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ 20 ದಿನಗಳಲ್ಲಿ 27,500 ಗ್ರಾಮಗಳನ್ನು ಮುಟ್ಟುವ ಗುರಿ ಹೊಂದಿದ್ದೇವೆ. ದೇಶದಲ್ಲಿ ಒಟ್ಟು 22 ಕೋಟಿ ರಾಮಭಕ್ತರ ಮನೆಗಳಿದ್ದು, ಅದರಲ್ಲಿ ಕನಿಷ್ಠ 11 ಕೋಟಿ ಮನೆಗಳನ್ನಾದರೂ ತಲುಪಲಾಗುವುದು. ಈ ಕುರಿತು ಜನಜಾಗೃತಿ ಮೂಡಿಸಲು ಉತ್ತರ ಪ್ರಾಂತದಲ್ಲಿ 50 ಲಕ್ಷ ಕರಪತ್ರಗಳನ್ನು ಹಂಚಲಾಗುವುದು’ ಎಂದರು.