ನಗರದ ಬಿಡನಾಳದಲ್ಲಿರುವ ತಮ್ಮ ಮನೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೇಹಾ ಹತ್ಯೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿರುವುದರಿಂದ ಹಲವರು ಸಾಂತ್ವನ ಹೇಳಲು ಮನೆಗೆ ಬರುತ್ತಿದ್ದಾರೆ. ಈ ವೇಳೆ ಸಂಶಯಾಸ್ಪದ ವ್ಯಕ್ತಿಗಳೂ ಕಂಡು ಬರುತ್ತಿದ್ದಾರೆ' ಎಂದರು.
'ಸಾಂತ್ವನ ಹೇಳುವ ನೆಪದಲ್ಲಿ ಬಂದು, ಮನೆಯ ಸುತ್ತ ತಿರುಗಾಡಿರುವ ಶಂಕಾಸ್ಪದ ವ್ಯಕ್ತಿಗಳಿಂದ ನನ್ನ ಜೀವಕ್ಕೆ ಅಪಾಯವಿರುವ ಮನ್ಸೂಚನೆ ಇದೆ. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸೂಕ್ತ ಭದ್ರತೆ ಒದಗಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು' ಎಂದರು.
'ನೇಹಾ ಹತ್ಯೆ ಮಾಡುವ ಮುನ್ನ ಫಯಾಜ್ ತನ್ನ ಸ್ನೇಹಿತರೊಂದಿಗೆ ನಮ್ಮ ಮನೆ ಸುತ್ತ ಸುತ್ತಾಡಿದ್ದ. ನೇಹಾಗೆ ಕರೆ ಮಾಡಿ, ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಹಿಂದೆ ಅಪಹರಿಸಿಲು ಸಹ ಯತ್ನಿಸಿದ್ದ. ಇದೊಂದು ವ್ಯವಸ್ಥಿತ ಕೃತ್ಯವಾಗಿದೆ' ಎಂದು ಹೇಳಿದರು.