ಉದ್ಯಮಿ ಜಗದೀಶ ಹಿರೇಮಠ, ‘ಪ್ರಪಂಚದಲ್ಲೇ ಹೆಚ್ಚು ಯುವಜನರನ್ನು ಹೊಂದಿರುವ ನಮ್ಮ ಬಳಿ ಬುದ್ಧಿವಂತಿಕೆ ಇದೆ. ಆದರೆ, ಅದನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ನಮ್ಮಲ್ಲಿ ಎಲ್ಲಾ ರೀತಿಯ ಸಂಪತ್ತು ಇದ್ದರೂ, ಭಾರತ ಇಂದಿಗೂ ಆಮದನ್ನೇ ನೆಚ್ಚಿಕೊಂಡಿದೆ. ಪ್ರತಿ ತಂತ್ರಜ್ಞಾನದ ಮೂಲವೂ ಬೇರೆ ದೇಶವೇ ಆಗಿದೆ. ಅವರ ಆಣತಿಯಂತೆ, ಭಾರತದಲ್ಲಿ ಉತ್ಪಾದನೆ ನಡೆಯುತ್ತಿದೆ. ಆ ದೇಶಗಳ ಸ್ಥಾನವನ್ನು ನಾವು ತಲುಪಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು.