ನವಲಗುಂದ: ಗರ್ಭಿಣಿಯರು ಹಾಗೂ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮ ಜರುಗುತ್ತಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಸೊಪ್ಪಿಮಠ ಹೇಳಿದರು.
ಪಟ್ಟಣದ ಗ್ರಾಮ ಚವಡಿಯಲ್ಲಿ ಸೋಮವಾರ ಇಂದ್ರಧನುಷ್ 5.0 ಸಮಾರಂಭದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಸಭಾ ಸದಸ್ಯ ಜೀವನ ಪವಾರ ಮಾತನಾಡಿ, ಇಂದ್ರಧನುಷ್ 5.0 ಕಾರ್ಯಕ್ರಮವು ಇಂದಿನಿಂದ ಐದು ದಿನಗಳವರೆಗೆ ದೇಶದಾದ್ಯಂತ ನಡೆಯುತ್ತಿದೆ ಎಂದರು
ಪುರಸಭಾ ಸದಸ್ಯೆ ಹುಸೇನಬಿ ಧಾರವಾಡ, ಪುರಸಭೆ ಅಧಿಕಾರಿ ಎ.ಕೆ.ಜೋಶಿ, ಆರೋಗ್ಯ ಇಲಾಖೆಯ ಎಂ.ಆರ್.ಕುಲಕರ್ಣಿ, ಸುಭಾಸ್ ಮಂಗಳಿ, ಶರಪ್ಪ ಕಡ್ಲಿಬಿತ್ತಿ, ಶೋಭಾ ಕುಲಕರ್ಣಿ, ರೇಣುಕಾ ಮುಳಗುಂದ, ಶೋಭಾ ಪತ್ತಾರ ಸೇರಿದಂತೆ ಎಲ್ಲ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.