ಧನುರ್ಮಾಸದಲ್ಲಿ ಭಗವಂತ ನಿದ್ರಾ ಸಮಯದಿಂದ ಎಚ್ಚರಗೊಂಡು, ಏಕಾದಶಿ ದಿನ ದಕ್ಷಿಣಾಯದಿಂದ ಉತ್ತರಾಯಣ ಪುಣ್ಯಕ್ಷೇತ್ರಕ್ಕೆ ಬರುತ್ತಾನೆ. ಅಂದು ದೇವರಿಗೆ ನೈವೇದ್ಯ ನೀಡಿ ‘ನಾರಾಯಣ’, ‘ಗೋವಿಂದ’ ನಾಮಸ್ಮರಣೆ ಮಾಡಿ, ವೈಕುಂಠ ದ್ವಾರವನ್ನು ಹಾದು ಹೋದರೆ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ವೈಕುಂಠ ಆಚರಣೆಯೊಂದಿಗೆ ಬೆಸೆದುಕೊಂಡಿದೆ.