ಪಟ್ಟಣದಲ್ಲಿ ನಿರ್ಮಿಸುತ್ತಿರುವ ಮುಖ್ಯ ಚರಂಡಿಗಳು, ರಸ್ತೆಗಳು ಮತ್ತು ಸೇತುವೆಗಳು ಅಭಿವೃದ್ಧಿಗೊಂಡು ಪಟ್ಟಣ ಸುಧಾರಣೆ ಯಾಗುವುದರ ಜೊತೆಗೆ ದೂಳುಮುಕ್ತ ರಸ್ತೆಗಳಲ್ಲಿ ಸರಾಗವಾಗಿ ಓಡಾಡಬಹುದು. ಕೊಳಚೆಯಿಂದ ತುಂಬಿರುವ ಗಟಾರುಗಳಿಂದ ಮುಕ್ತಿ ಸಿಗುತ್ತದೆ ಎಂದು ಕನಸು ಕಂಡಿದ್ದ ಸ್ಥಳೀಯುರಿಗೆ ನೀರು ಹರಿಯದ ಗಟಾರ, ಕಿತ್ತು ಹೋಗುತ್ತಿರುವ ಕಾಂಕ್ರೀಟ್ ರಸ್ತೆಗಳನ್ನು ಕಂಡು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.