ಕೋಣಂದೂರು: ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಗದ್ದೆಯಲ್ಲಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಮೂರೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದೆ.
ರಮೇಶ್ ಮತ್ತು ಜಯಲಕ್ಷ್ಮಿ ದಂಪತಿಯ ಮಗು ಅರ್ಥ ಶನಿವಾರ ಸಂಜೆ ಮನೆಯ ಸಮೀಪದ ಅಂಗಳದಲ್ಲಿ ಅಣ್ಣ ದಯಾನಂದ ಜತೆ ಆಟವಾಡುತ್ತಿದ್ದಾಗ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಅಣ್ಣ ದಯಾನಂದ ಎಷ್ಟೇ ಕೂಗಿದರೂ ಆಕೆ ಹೊರಬರಲಾಗಲಿಲ್ಲ. ಬೆಂಕಿಯ ಜ್ವಾಲೆಯಲ್ಲಿ ಮಗು ಬೆಂದು ಹೋಗಿದೆ. ವಿಷಯ ತಿಳಿದ ಅಕ್ಕಪಕ್ಕದವರು ಸುಮಾರು 500 ಪಿಂಡಿ ಸುಟ್ಟು ಕರಕಲಾದ ಹುಲ್ಲಿನ ಬಣವೆಯಿಂದ ಮಗುವನ್ನು ಹೊರತೆಗೆದಿದ್ದಾರೆ.