ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನಗದ್ದೆ: ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಮಗು ಬಲಿ

Last Updated 26 ಜನವರಿ 2019, 14:42 IST
ಅಕ್ಷರ ಗಾತ್ರ

ಕೋಣಂದೂರು: ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಗದ್ದೆಯಲ್ಲಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಮೂರೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದೆ.

ರಮೇಶ್ ಮತ್ತು ಜಯಲಕ್ಷ್ಮಿ ದಂಪತಿಯ ಮಗು ಅರ್ಥ ಶನಿವಾರ ಸಂಜೆ ಮನೆಯ ಸಮೀಪದ ಅಂಗಳದಲ್ಲಿ ಅಣ್ಣ ದಯಾನಂದ ಜತೆ ಆಟವಾಡುತ್ತಿದ್ದಾಗ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.

ಅಣ್ಣ ದಯಾನಂದ ಎಷ್ಟೇ ಕೂಗಿದರೂ ಆಕೆ ಹೊರಬರಲಾಗಲಿಲ್ಲ. ಬೆಂಕಿಯ ಜ್ವಾಲೆಯಲ್ಲಿ ಮಗು ಬೆಂದು ಹೋಗಿದೆ. ವಿಷಯ ತಿಳಿದ ಅಕ್ಕಪಕ್ಕದವರು ಸುಮಾರು 500 ಪಿಂಡಿ ಸುಟ್ಟು ಕರಕಲಾದ ಹುಲ್ಲಿನ ಬಣವೆಯಿಂದ ಮಗುವನ್ನು ಹೊರತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT