‘ಮಹದಾಯಿ ಹೋರಾಟ ಸಾಕಷ್ಟು ಏಳು ಬೀಳುಗಳನ್ನುಕಂಡಿದೆ. ಏನೇ ಸಂಕಷ್ಟ ಬಂದರೂ ಧೃತಿಗೆಡುವ ಪ್ರಶ್ನೆಯೇ ಇಲ್ಲ’ಎಂದು ವೀರೇಶ ಸೊಬರದಮಠ ಹೇಳಿದರು. ‘ಮಹದಾಯಿ ಹೋರಾಟದಲ್ಲಿ ರೈತರು ಸೈನಿಕರಿದ್ದಂತೆ. ಸೈನಿಕರಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಆದರೆ, ಅವುಗಳನ್ನು ಸಹಿಸಿಕೊಂಡು ಮುಂದೆ ಸಾಗುತ್ತಾರೆ. ಹಾಗೆಯೇ ನಮ್ಮ ಗುರಿ ಒಂದೇ, ಮಲಪ್ರಭಾಕ್ಕೆ ಮಹದಾಯಿ ನೀರು ಹರಿಯಬೇಕು. ಅಲ್ಲಿಯವರೆಗೆ ರೈತರು ಒಂದಾಗಿ ಹೋರಾಟ ನಡೆಸಬೇಕು’ ಎಂದರು.