<p><strong>ರೋಣ: </strong>ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಶೀಘ್ರದಲ್ಲಿಯೇ ಕಡಲೆ ಖರೀದಿ ಕೇಂದ್ರವನ್ನು ಸ್ಥಾಪಿಸಿಬೇಕು, ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ಹಾಗೂ ಬೆಳವಣಕಿ ರೈತರು ನಾಲ್ಕೈದು ಗಂಟೆ ರಸ್ತೆ ತಡೆ ನಡೆಸಿದರು.</p>.<p>ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಲೋಕನಗೌಡ ಗೌಡರ ಮಾತನಾಡಿ ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಕಡಲೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದರು.</p>.<p>ಕಡಲೆ ಬೆಳೆಗೆ ಪ್ರತಿ ಕ್ವಿಂಟಲ್ಗೆ ₹5400 ನಿಗದಿಪಡಿಸಿ ಶೀಘ್ರವೇ ಜಿಲ್ಲೆಯ್ಯಾದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದರು. ಬೆಳವಣಕಿ ಗ್ರಾಮಸ್ಥರು ಮಾತನಾಡಿ ಗ್ರಾಮಕ್ಕೆ ಹಲವು ತಿಂಗಳುಗಳಿಂದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ಹೀಗಾಗಿ ಕೂಡಲೇ ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿದರು.</p>.<p>ಮೂರು ತಿಂಗಳ ಹಿಂದೆ ಎಸ್.ಸಿ ಕಾಲೊನಿಯಲ್ಲಿ ಮಳೆಯಾಗಿ ಹಲವು ಮನೆಗಳು ಬಿದ್ದು ಹೋಗಿವೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಮನೆಯ ಉತಾರಗಳನ್ನು ಒದಗಿಸಿ ಎಂದು ಹೇಳಿದ್ದರು.</p>.<p>ಆದರೆ ಉತಾರ ನೀಡಲು ಪಿಡಿಒ ಇಲ್ಲ. ಆದ್ದರಿಂದ ತಕ್ಷಣವೇ ಕಾಯಂ ಪಿಡಿಒ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಸುಭಾಸ ಮುದಿಗೌಡ್ರ, ವೀರಪ್ಪ ಕುಸುಗಲ್ಲ, ಎಂ.ವಿ.ದೇಸಾಯಿಗೌಡ್ರ, ಹನುಮಂತಪ್ಪ ಸೈದಾಪೂರ, ಪ್ರಭು ಪಾಟೀಲ, ಭೀಮರಡ್ಡಿ ಹಾಳಕೇರಿ, ಮುತ್ತು ನಂದಿ ಮತ್ತು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ: </strong>ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಶೀಘ್ರದಲ್ಲಿಯೇ ಕಡಲೆ ಖರೀದಿ ಕೇಂದ್ರವನ್ನು ಸ್ಥಾಪಿಸಿಬೇಕು, ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ಹಾಗೂ ಬೆಳವಣಕಿ ರೈತರು ನಾಲ್ಕೈದು ಗಂಟೆ ರಸ್ತೆ ತಡೆ ನಡೆಸಿದರು.</p>.<p>ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಲೋಕನಗೌಡ ಗೌಡರ ಮಾತನಾಡಿ ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಕಡಲೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದರು.</p>.<p>ಕಡಲೆ ಬೆಳೆಗೆ ಪ್ರತಿ ಕ್ವಿಂಟಲ್ಗೆ ₹5400 ನಿಗದಿಪಡಿಸಿ ಶೀಘ್ರವೇ ಜಿಲ್ಲೆಯ್ಯಾದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದರು. ಬೆಳವಣಕಿ ಗ್ರಾಮಸ್ಥರು ಮಾತನಾಡಿ ಗ್ರಾಮಕ್ಕೆ ಹಲವು ತಿಂಗಳುಗಳಿಂದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ಹೀಗಾಗಿ ಕೂಡಲೇ ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿದರು.</p>.<p>ಮೂರು ತಿಂಗಳ ಹಿಂದೆ ಎಸ್.ಸಿ ಕಾಲೊನಿಯಲ್ಲಿ ಮಳೆಯಾಗಿ ಹಲವು ಮನೆಗಳು ಬಿದ್ದು ಹೋಗಿವೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಮನೆಯ ಉತಾರಗಳನ್ನು ಒದಗಿಸಿ ಎಂದು ಹೇಳಿದ್ದರು.</p>.<p>ಆದರೆ ಉತಾರ ನೀಡಲು ಪಿಡಿಒ ಇಲ್ಲ. ಆದ್ದರಿಂದ ತಕ್ಷಣವೇ ಕಾಯಂ ಪಿಡಿಒ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಸುಭಾಸ ಮುದಿಗೌಡ್ರ, ವೀರಪ್ಪ ಕುಸುಗಲ್ಲ, ಎಂ.ವಿ.ದೇಸಾಯಿಗೌಡ್ರ, ಹನುಮಂತಪ್ಪ ಸೈದಾಪೂರ, ಪ್ರಭು ಪಾಟೀಲ, ಭೀಮರಡ್ಡಿ ಹಾಳಕೇರಿ, ಮುತ್ತು ನಂದಿ ಮತ್ತು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>