ಮೋಡಿ ಮಾಡಿದ ಶ್ರೀರಾಮುಲು, ಅನಿಲ ಮೆಣಸಿನಕಾಯಿ ಜೋಡಿ: ಚುನಾವಣೆಗೂ ಮುನ್ನ ಎರಡು ದಿನಗಳ ಕಾಲ ಗದಗ–ಬೆಟಗೇರಿ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದ ಸಚಿವ ಶ್ರೀರಾಮುಲು ಹಾಗೂ ಯುವ ಮುಖಂಡ ಅನಿಲ ಮೆಣಸಿನಕಾಯಿ ಜೋಡಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ಎಸ್.ವಿ.ಸಂಕನೂರ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಬಿಜೆಪಿ ನಾಯಕ
ರೆಲ್ಲರ ಸಾಂಘಿಕ ಪ್ರಯತ್ನದಿಂದ ಗದಗ ಬೆಟಗೇರಿ ನಗರಸಭೆ ಬಿಜೆಪಿ ಕೈವಶವಾಗಿದೆ.