‘ರಾಜ್ಯದಲ್ಲಿ ಏಪ್ರಿಲ್ 22ರ ವರೆಗೆ 29,512 ಜನರನ್ನು ಕೊರೊನಾ ಸೋಂಕು ಪರೀಕ್ಷೆಗೊಳಪಡಿಸಿದ್ದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಇತರೆ ರಾಜ್ಯಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಜತೆಗೆ ರಾಜ್ಯಕ್ಕೆ ಪೂರೈಕೆಯಾಗಿರುವ ಕೊರೊನಾ ಪರೀಕ್ಷಾ ಕಿಟ್ಗಳು ಕಳಪೆಯಾಗಿದ್ದು, ಇದರಲ್ಲಿ ಪರೀಕ್ಷೆ ನಡೆಸದಂತೆ ಐಸಿಎಂಆರ್ ತಡೆ ನೀಡಿದೆ. ಕೂಡಲೇ ಸರ್ಕಾರ ಈ ಕಿಟ್ಗಳನ್ನು ಪೂರೈಸಿದವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.