<h4><strong>ಮುಳಗುಂದ</strong>: <strong>ಪಟ್ಟಣದ ಐತಿಹಾಸಿಕ ಅಬ್ಬಿಕೆರೆ ಸೇರುತ್ತಿರುವ ಊರೊಳಗಿನ ಚರಂಡಿ ನೀರಿಗೆ ಹೊರ ಹೋಗಲು ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಕೆರೆಯ ನೀರು ದುರ್ನಾತ ಬೀರುತ್ತಿದೆ.</strong></h4><h4>ಒಂದು ಕಾಲದಲ್ಲಿ ಗ್ರಾಮದ ಜನರಿಗೆ ಕುಡಿಯುವ ಶುದ್ಧ ನೀರಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಆದರೆ ಈಗ ಕೈ ತೊಳಿಯಲು ಸಹ ಯೋಚಿಸುವಷ್ಟು ನೀರು ಮಲೀನಗೊಂಡಿದೆ. ಈ ಕೆರೆ ಸರಾಸರಿ 20 ಎಕರೆ ವಿಸ್ತಿರ್ಣ ಹೊಂದಿದೆ.</h4><h4>ಕೆರೆಯ ದಕ್ಷಿಣ, ಪಶ್ಚಿಮ ದಿಕ್ಕಿನಲ್ಲಿರುವ ಬಹುಭಾಗ ಮನೆಗಳ ತ್ಯಾಜ್ಯ ನೀರು ಈ ಕೆರೆಗೆ ಬಂದು ಸೇರುತ್ತಿದೆ. ಇದರ ಸುತ್ತಲಿರುವ ಸಾರ್ವಜನಿಕರಿಗೆ ಕೆರೆ ದಡವೆ ಬಯಲು ಬರ್ಹಿದೆಸೆ ತಾಣವಾಗಿರುವುದು ದುರ್ದೈವದ ಸಂಗತಿ.</h4><h4>ತಿಪ್ಪೆ, ಇನ್ನಿತರ ಕಸವನ್ನು ತಂದು ದಡದಲ್ಲೆ ಸುರಿಯಲಾಗುತ್ತಿದೆ. ಇನ್ನೂಂದು ಕಡೆ ಸುಲಭ ಶೌಚಾಲಯದ ನೀರು ಪೈಪ್ ಒಡೆದು ಕೆರೆಗೆ ಸೇರುತ್ತಿದೆ. ಸ್ವಚ್ಛತೆ ಕುರಿತು ಪಪಂ ಮೂಡಿಸುತ್ತಿಲ್ಲ ಜಾಗೃತಿ ಎಂದು ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.</h4><h4>ಕೆರೆಯ ಮದ್ಯ ಪ್ರಾಕೃತಿಕವಾದ ನಡುಗಡ್ಡೆಯಿದ್ದು ಪುರಾತನ ಹುಣಸೆ ಮರ, ಸಣ್ಣ ಪುಟ್ಟ ಗಿಡಗಂಟೆಗಳು ಬೆಳೆದು ವಿವಿಧ ಜಾತಿಯ ಪಕ್ಷಿಗಳ ನೆಲೆಸುವ ನೆಚ್ಚಿನ ತಾಣವಾಗಿದೆ. ಈಚೆಗೆ ಅಪರೂಪದ ವಿದೇಶಿ ಪಕ್ಷಿಗಳು ಸಹ ಇಲ್ಲಿ ಕಾಣುತ್ತಿರುವುದ ಜನರನ್ನು ಬೆರಗುಗೊಳಿಸಿವೆ.</h4><h4>2013 ರಲ್ಲಿ ಸ್ಥಳಿಯ ಪಂಚಾಯ್ತಿ ವತಿಯಿಂದ ಕೆರೆ ಅಭಿವೃದ್ದಿ ಮಾಡುವ ಯೋಜನೆ ಕೈಗೊಂಡಿತ್ತಾದರೂ ಸಂಪೂರ್ಣ ಕಾಮಗಾರಿ ನಡೆದಿರಲಿಲ್ಲ. ಈಗ ಅಂದಾಜು ₹ 2.75 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಸಂತಸ ಮೂಡಿಸಿದೆ.</h4><h4>ಆದರೆ ಮನೆಗಳ ತ್ಯಾಜ್ಯ ನೀರು ಕೆರೆಗೆ ಸೇರುವುದನ್ನ ತಪ್ಪಿಸಲು ಯೋಜನೆ ರೂಪಿಸಲಾಗಿಲ್ಲ. ಈ ಹಿಂದೆ ಹೊಲಗಳ ಮಳೆ ನೀರು ಹರಿದು ಬರುವ ಕಾಲುವೆ ನಿರ್ಮಾಣ ಮಾಡಲಾಗಿತ್ತು. ಈ ಕಾಲುವೆ ಮೂಲಕವು ಚರಂಡಿ ನೀರು ಬಂದು ಕೆರೆಗೆ ಸೇರುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಬೇಕು ಎಂದು ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಎಸ್.ಕಣವಿ ಆಗ್ರಹಿಸಿದರು.</h4>.<div><blockquote>ಕೆಲವೆಡೆ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಇದನ್ನು ಬೇರೆಡೆಗೆ ಸಾಗಿಸುವ ಯೋಜನೆ ಇದ್ದು ಕೆರೆ ಸುತ್ತಮುತ್ತಲಿರುವ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ </blockquote><span class="attribution">ಮಂಜುನಾಥ ಗುಳೇದ ಪ.ಪಂ ಮುಖ್ಯಾಧಿಕಾರಿ</span></div>.<div><blockquote>ಕೆರೆಗೆ ಮಲೀನ ನೀರು ಬರುವುದನ್ನು ತಡೆಯುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವದು. ಇದರ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೂ ತರಲಾಗುವುದು</blockquote><span class="attribution">ಲಕ್ಷ್ಮವ್ವ ಕುಂದಗೋಳ ಪಪಂ ಸದಸ್ಯರು.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h4><strong>ಮುಳಗುಂದ</strong>: <strong>ಪಟ್ಟಣದ ಐತಿಹಾಸಿಕ ಅಬ್ಬಿಕೆರೆ ಸೇರುತ್ತಿರುವ ಊರೊಳಗಿನ ಚರಂಡಿ ನೀರಿಗೆ ಹೊರ ಹೋಗಲು ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಕೆರೆಯ ನೀರು ದುರ್ನಾತ ಬೀರುತ್ತಿದೆ.</strong></h4><h4>ಒಂದು ಕಾಲದಲ್ಲಿ ಗ್ರಾಮದ ಜನರಿಗೆ ಕುಡಿಯುವ ಶುದ್ಧ ನೀರಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಆದರೆ ಈಗ ಕೈ ತೊಳಿಯಲು ಸಹ ಯೋಚಿಸುವಷ್ಟು ನೀರು ಮಲೀನಗೊಂಡಿದೆ. ಈ ಕೆರೆ ಸರಾಸರಿ 20 ಎಕರೆ ವಿಸ್ತಿರ್ಣ ಹೊಂದಿದೆ.</h4><h4>ಕೆರೆಯ ದಕ್ಷಿಣ, ಪಶ್ಚಿಮ ದಿಕ್ಕಿನಲ್ಲಿರುವ ಬಹುಭಾಗ ಮನೆಗಳ ತ್ಯಾಜ್ಯ ನೀರು ಈ ಕೆರೆಗೆ ಬಂದು ಸೇರುತ್ತಿದೆ. ಇದರ ಸುತ್ತಲಿರುವ ಸಾರ್ವಜನಿಕರಿಗೆ ಕೆರೆ ದಡವೆ ಬಯಲು ಬರ್ಹಿದೆಸೆ ತಾಣವಾಗಿರುವುದು ದುರ್ದೈವದ ಸಂಗತಿ.</h4><h4>ತಿಪ್ಪೆ, ಇನ್ನಿತರ ಕಸವನ್ನು ತಂದು ದಡದಲ್ಲೆ ಸುರಿಯಲಾಗುತ್ತಿದೆ. ಇನ್ನೂಂದು ಕಡೆ ಸುಲಭ ಶೌಚಾಲಯದ ನೀರು ಪೈಪ್ ಒಡೆದು ಕೆರೆಗೆ ಸೇರುತ್ತಿದೆ. ಸ್ವಚ್ಛತೆ ಕುರಿತು ಪಪಂ ಮೂಡಿಸುತ್ತಿಲ್ಲ ಜಾಗೃತಿ ಎಂದು ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.</h4><h4>ಕೆರೆಯ ಮದ್ಯ ಪ್ರಾಕೃತಿಕವಾದ ನಡುಗಡ್ಡೆಯಿದ್ದು ಪುರಾತನ ಹುಣಸೆ ಮರ, ಸಣ್ಣ ಪುಟ್ಟ ಗಿಡಗಂಟೆಗಳು ಬೆಳೆದು ವಿವಿಧ ಜಾತಿಯ ಪಕ್ಷಿಗಳ ನೆಲೆಸುವ ನೆಚ್ಚಿನ ತಾಣವಾಗಿದೆ. ಈಚೆಗೆ ಅಪರೂಪದ ವಿದೇಶಿ ಪಕ್ಷಿಗಳು ಸಹ ಇಲ್ಲಿ ಕಾಣುತ್ತಿರುವುದ ಜನರನ್ನು ಬೆರಗುಗೊಳಿಸಿವೆ.</h4><h4>2013 ರಲ್ಲಿ ಸ್ಥಳಿಯ ಪಂಚಾಯ್ತಿ ವತಿಯಿಂದ ಕೆರೆ ಅಭಿವೃದ್ದಿ ಮಾಡುವ ಯೋಜನೆ ಕೈಗೊಂಡಿತ್ತಾದರೂ ಸಂಪೂರ್ಣ ಕಾಮಗಾರಿ ನಡೆದಿರಲಿಲ್ಲ. ಈಗ ಅಂದಾಜು ₹ 2.75 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಸಂತಸ ಮೂಡಿಸಿದೆ.</h4><h4>ಆದರೆ ಮನೆಗಳ ತ್ಯಾಜ್ಯ ನೀರು ಕೆರೆಗೆ ಸೇರುವುದನ್ನ ತಪ್ಪಿಸಲು ಯೋಜನೆ ರೂಪಿಸಲಾಗಿಲ್ಲ. ಈ ಹಿಂದೆ ಹೊಲಗಳ ಮಳೆ ನೀರು ಹರಿದು ಬರುವ ಕಾಲುವೆ ನಿರ್ಮಾಣ ಮಾಡಲಾಗಿತ್ತು. ಈ ಕಾಲುವೆ ಮೂಲಕವು ಚರಂಡಿ ನೀರು ಬಂದು ಕೆರೆಗೆ ಸೇರುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಬೇಕು ಎಂದು ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಎಸ್.ಕಣವಿ ಆಗ್ರಹಿಸಿದರು.</h4>.<div><blockquote>ಕೆಲವೆಡೆ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಇದನ್ನು ಬೇರೆಡೆಗೆ ಸಾಗಿಸುವ ಯೋಜನೆ ಇದ್ದು ಕೆರೆ ಸುತ್ತಮುತ್ತಲಿರುವ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ </blockquote><span class="attribution">ಮಂಜುನಾಥ ಗುಳೇದ ಪ.ಪಂ ಮುಖ್ಯಾಧಿಕಾರಿ</span></div>.<div><blockquote>ಕೆರೆಗೆ ಮಲೀನ ನೀರು ಬರುವುದನ್ನು ತಡೆಯುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವದು. ಇದರ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೂ ತರಲಾಗುವುದು</blockquote><span class="attribution">ಲಕ್ಷ್ಮವ್ವ ಕುಂದಗೋಳ ಪಪಂ ಸದಸ್ಯರು.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>