ಸವಡಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್
ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ನೂನ್ಯತೆಗಳನ್ನು ಸರಿಪಡಿಸುವ ಕಾರ್ಯ ಜರೂರಾಗಿ ಆಗಬೇಕಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೆ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು
–ಸೋಮು ನಾಗರಾಜ ಕೊತಬಾಳ ಗ್ರಾಮಸ್ಥ
ಯೋಜನೆಯ ಉದ್ದೇಶ ಸರಿಯಾಗಿದ್ದು ಅದರ ಅನುಷ್ಠಾನ ಸರಿ ಇಲ್ಲ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ
–ಎಂ.ಎಚ್.ನದಾಫ ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ
ಶೇ 25ರಷ್ಟು ಕಾಮಗಾರಿ ಬಾಕಿ
ರೋಣ ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಶೇ 72ರಿಂದ 75 ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ ಕೆಲವು ಭಾಗಗಳಲ್ಲಿ ಕಾಮಗಾರಿ ಬಾಕಿ ಉಳಿದಿದೆ. ಶೀಘ್ರದಲ್ಲಿ ಅವುಗಳನ್ನು ಪೂರ್ಣಗೊಳಿಸಲಾಗುವುದು. ಕಾಮಗಾರಿ ಮಾತ್ರ ನಮ್ಮ ಇಲಾಖೆಗೆ ಸಂಬಂಧಿಸಿದ್ದು ಅದರ ನಿರ್ವಹಣೆ ಗ್ರಾಮ ಪಂಚಾಯಿತಿಗಳಿಗೆ ಬಿಟ್ಟುಕೊಡಲಾಗಿದೆ. ನೀರು ಪೂರೈಕೆಯಲ್ಲಿ 20 ತಾಸು ಪಂಪಿಂಗ್ ಮತ್ತು ಲಿಫ್ಟಿಂಗ್ಗೆ ವಿದ್ಯುತ್ ಅವಶ್ಯಕತೆ ಇದ್ದು ಕೆಲವು ಕಡೆ ವಿದ್ಯುತ್ ವ್ಯತ್ಯಯದಿಂದ ದಿನದ 24 ತಾಸು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. – ಚಂದ್ರಕಾಂತ ನೇರಳೆಕರ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರೋಣ
ಹೊಸ ಫ್ಲಾಟ್ಗಳಿಗೆ ನೀರು ತಲುಪುತ್ತಿಲ್ಲ
ಜೆಜೆಎಂ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿ ವರ್ಷಗಳೇ ಕಳೆದರೂ ಇಂದಿನವರೆಗೂ ನೀರು ಪೂರೈಕೆ ಆಗುತ್ತಿಲ್ಲ. ಡಿಬಿಒಟಿ ನೀರನ್ನು ಹಳೆಯ ನಲ್ಲಿಗಳ ಮೂಲಕ ಸರಬರಾಜು ಮಾಡುತ್ತಿದ್ದು ಅದು ಕೂಡ ಹೊಸ ಫ್ಲಾಟ್ಗಳಿಗೆ ತಲುಪುತ್ತಿಲ್ಲ. ಹಳೆಯ ಓವರ್ ಹೆಡ್ ಟ್ಯಾಂಕಿಗೆ ಡಿಬಿಒಟಿ ನೀರು ತುಂಬಲಾಗುತ್ತಿದ್ದು ಅದು ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.–ವಿಕ್ರಮ ಬರಡ್ಡಿ ಸೋಮನಕಟ್ಟಿ ಗ್ರಾಮಸ್ಥ