ಗದಗ: ‘ದೇಶದ ಬೆನ್ನೆಲುಬು ರೈತ ಎಂದು ಹೇಳುತ್ತಲೇ ಎಲ್ಲ ಸರ್ಕಾರಗಳು ರೈತರ ಬೆನ್ನಿಗೆ ಚೂರಿ ಹಾಕಿವೆ’ ಎಂದು ಅಖಿಲ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ವೇದಿಕೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಸವರಾಜ ದೇಸಾಯಿ ಆರೋಪಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ, ವಿದ್ಯುತ್ ಉದಾರೀಕರಣ ಖಾಸಗೀಕರಣದ ಮೂಲಕ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇದು ಖಂಡನಾರ್ಹ’ ಎಂದರು.
ದಾವಲ್ ಎಂ.ಮುಳಗುಂದ, ಎಲ್.ನಾರಾಯಣಸ್ವಾಮಿ, ದಾವಲಸಾಬ ಬಿ. ಉಮಚಗಿ, ಬಕ್ಷಿ ಪಿಂಜಾರ, ಪರಶುರಾಮ ಬನ್ನೂರ, ಸಿಕಂದರ ಸೊನ್ನದ, ಸಮೀರ ಕುನ್ನಿಬಾವಿ ಇದ್ದರು.