ಚಿಕ್ಕನರಗುಂದದ ಬಸಲಿಂಗಪ್ಪ ಸಿದ್ದಲಿಂಗಪ್ಪ ಅಂಗಡಿ ಮೇ 13ರಂದು ಕೋವಿಡ್ನಿಂದ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದನ್ನು ವಿಶ್ವ ತಂದೆಯಂದಿರ ದಿನದಂದು ನೆನಪಿಸಿಕೊಂಡ ಬಸವರಾಜ, ‘ನಮ್ಮ ನಿರ್ಲಕ್ಷವೋ ಏನೋ ಒಟ್ಟಿನಲ್ಲಿ ಅಪ್ಪನನ್ನು ಕೋವಿಡ್ ಬಲಿ ಪಡೆದಿದೆ. ಆದರೆ ಅವರು ಕೃಷಿ ಕೆಲಸದೊಂದಿಗೆ ನಮ್ಮನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕಾರ, ನೀಡಿದ ಶಿಕ್ಷಣ ಎಂದಿಗೂ ಮರೆಯಲಾರೆವು’ ಎಂದು ಅಪ್ಪನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.