ಗದಗ: ಕನ್ನಡ ಸಾರಸ್ವತ ಲೋಕಕ್ಕೆ ‘ಚೆಂಬೆಳಕಿನ ಕವಿ’ ಚೆನ್ನವೀರ ಕಣವಿ ಅವರ ಕೊಡುಗೆ ಅಪಾರ. ಸತ್ವಯುತ ಕವಿತೆಗಳ ಪ್ರತಿ ಸಾಲುಗಳೂ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದವು. ಸಾರಸ್ವತ ಲೋಕದ ಕಾವ್ಯ ಸಿಂಹಾಸನದಲ್ಲಿ ವಿರಾಜಮಾನರಾದರೂ ಅವರು ಹುಟ್ಟಿದ ಊರು, ಮೆಟ್ಟಿದ ನೆಲವನ್ನು ಎಂದಿಗೂ ಮರೆಯಲಿಲ್ಲ. ಗದಗ ಜಿಲ್ಲೆಯೊಂದಿಗಿನ ನಂಟನ್ನು ಕೊನೆವರೆಗೂ ಉಳಿಸಿಕೊಂಡಿದ್ದರು.