‘ಜ.24ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ‘ಕಪ್ಪತ ಉತ್ಸವ’ ಪಕ್ಕಾ ಅಕಾಡೆಮಿಕ್ ಕಾರ್ಯಕ್ರಮ. ಕಾಡು, ವನ್ಯಜೀವಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡವರಿಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಜತೆಗೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ರುಜು ಕೂಡ ಇರಲಿದೆ. ಪ್ರಾಕೃತಿಕ ಸಂಪತ್ತನ್ನು ಹಾಳುಗೆಡವದೆ ಜೀವನ ಮುನ್ನಡೆಸುವುದು ಹೇಗೆ? ಎಂಬ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಈ ಬಾರಿ ಚರ್ಚೆ, ಸಂವಾದಗಳು ನಡೆಯಲಿವೆ’ ಎನ್ನುತ್ತಾರೆ ಡಿಸಿಎಫ್ ಸೂರ್ಯಸೇನ್.