‘30 ವರ್ಷಗಳ ಗುತ್ತಿಗೆ ಹಣವನ್ನು ಒಮ್ಮೆಲೇ ಕೊಡಬೇಕು ಎಂಬುದು ರೈತರ ಸದ್ಯದ ಬೇಡಿಕೆ ಆಗಿದೆ. ಆದರೆ, ಒಪ್ಪಂದದಲ್ಲಿನ ನಿಯಮಗಳಂತೆ ಅದಕ್ಕೆ ಅವಕಾಶವಿಲ್ಲ. ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದ್ದು, ರೈತರು ಹಾಗೂ ಕಂಪನಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.