<p>ಕೆ.ಎಂ.ಸತೀಶ್ ಬೆಳ್ಳಕ್ಕಿ</p>.<p><strong>ಗದಗ</strong>: ನಿಧಿ ಸಿಕ್ಕ ನಂತರ ರಾಜ್ಯದ ಗಮನ ಸೆಳೆದಿದ್ದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಪ್ರಕ್ರಿಯೆ ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಜ.16ರಂದು ಉತ್ಖನನಕ್ಕೆ ಅಧಿಕೃತವಾಗಿ ಚಾಲನೆ ಸಿಗುತ್ತಿದ್ದು, ನಾಲ್ಕು ತಿಂಗಳು ನಡೆಯಲಿದೆ.</p>.<p>ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ವರ್ಷ ಜೂನ್ 3ರಂದು ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಿದ್ದರು.</p>.<p>‘ಚಾಲುಕ್ಯರು, ಹೊಯ್ಸಳರು, ವಿಜಯನಗರ, ಮೈಸೂರು ಸಂಸ್ಥಾನ ಸೇರಿದಂತೆ ಹಿಂದಿನ ಕಾಲದ ಸಾಂಸ್ಕೃತಿಕ ಸಂಪತ್ತು ಉಳಿಸಿಕೊಳ್ಳುವುದು ಅವಶ್ಯಕ. ಲಕ್ಕುಂಡಿಯಲ್ಲಿ ನಡೆದಿರುವ ಮಾದರಿಯಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ಆರಂಭಿಸಲಾಗುವುದು. ದೇವಸ್ಥಾನಗಳ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಸಿಎಂ ಹೇಳಿದ್ದರು.</p>.<p>ಆದರೆ, ಆರು ತಿಂಗಳಾದರೂ ಉತ್ಖನನ ಆರಂಭಗೊಂಡಿರಲಿಲ್ಲ. ಉತ್ಖನನ ಮಾಡಲು ಭೂಮಿ ಒಣಗಿರಬೇಕು. ನಿರಂತರ ಮಳೆ ಸುರಿದಿದ್ದರಿಂದಾಗಿ ತಜ್ಞರು ಈ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದಿದ್ದರು. ಇದರ ಜತೆಗೆ, ಉತ್ಖನನಕ್ಕೆ ಗುರುತಿಸಿದ್ದ ಜಾಗದ ಪಕ್ಕದಲ್ಲಿನ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿ, ಒಪ್ಪಿಗೆ ಸಿಕ್ಕ ನಂತರ ಖಾಲಿ ಜಾಗ ಮತ್ತು ಕಟ್ಟಡವನ್ನು ₹50 ಲಕ್ಷಕ್ಕೆ ಖರೀದಿಸಲು ಸರ್ಕಾರ ಆದೇಶಿಸಿತ್ತು. ಈಗ ಭಾರತೀಯ ಪುರಾತತ್ವ ಇಲಾಖೆಯ ಪರಿಶೋಧನೆ ಮತ್ತು ಉತ್ಖನನ ವಿಭಾಗವು ಉತ್ಖನನಕ್ಕೆ ಅನುಮತಿ ನೀಡಿದ್ದರಿಂದ ಉತ್ಖನನ ಕೆಲಸ ಆರಂಭಗೊಳ್ಳಲಿದೆ. </p>.<p>‘ಲಕ್ಕುಂಡಿಯಲ್ಲಿ ಈ ಹಿಂದೆ 2023–04ರಲ್ಲಿ ಡಾ. ಅ.ಸುಂದರ್ ನೇತೃತ್ವದಲ್ಲಿ ಉತ್ಖನನ ನಡೆದಿತ್ತು. ಈ ಸಂದರ್ಭದಲ್ಲಿ ಲಕ್ಕುಂಡಿ ಕೇವಲ ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ವಿಜಯನಗರ ಆಳ್ವಿಕೆಯಲ್ಲಷ್ಟೇ ಪ್ರಮುಖ ಕೇಂದ್ರವಾಗಿರಲಿಲ್ಲ ಎಂಬುದು ಗೊತ್ತಾಗಿತ್ತು’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. </p>.<p>‘ಲಕ್ಕುಂಡಿಯಲ್ಲಿ ಜನವರಿ 10ರಂದು ಚಿನ್ನದ ನಿಧಿ ಸಿಕ್ಕಿತ್ತು. ಹೀಗಾಗಿ, ಇಂದಿನಿಂದ ಆರಂಭಗೊಳ್ಳುವ ಉತ್ಖನನ ವಿಶೇಷ ಮಹತ್ವ ಪಡೆದಿದೆ. ಇದಕ್ಕೆ ಪೂರಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಮುಗಿದಿದೆ. ಉತ್ಖನನಕ್ಕೆ ಬೇಕಿರುವ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. </p>.<p>ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರ ಬಾವಿ ಮಧ್ಯೆ ಗುರುತಿಸಿರುವ 10 ಮೀಟರ್ ಉದ್ದ 10 ಮೀಟರ್ ಅಗಲದ ಜಾಗದಲ್ಲಿ ಉತ್ಖನನ ನಡೆಯಲಿದೆ. ಇದಕ್ಕಾಗಿ ₹25 ಲಕ್ಷ ಹಣ ಬಿಡುಗಡೆಯಾಗಿದೆ. ಈ ಜಾಗ ಜ.10ರಂದು ಬಾಲಕನಿಗೆ ನಿಧಿ ದೊರೆತ ಸ್ಥಳದಿಂದ ತುಂಬ ಹತ್ತಿರದಲ್ಲೇ ಇದೆ. ಜತೆಗೆ ವೀರಭದ್ರೇಶ್ವರ ಗುಡಿಯಿಂದ ಸ್ವಲ್ಪ ದೂರದಲ್ಲೇ ಟಂಕಶಾಲೆ ಇತ್ತು ಎನ್ನಲಾಗಿದೆ. ಹಾಗಾಗಿ, ಈಗ ನಡೆಯುವ ಉತ್ಖನನದಿಂದ ಏನೆಲ್ಲಾ ವಸ್ತುಗಳು ಸಿಗಬಹುದು ಎಂಬ ಕುತೂಹಲ ಗರಿಗೆದರಿದೆ.</p>.<p>Quote - ಡಾ. ಟಿ.ಎಂ.ಕೇಶವ್ ಮತ್ತು ಡಾ. ಆರ್.ಶೇಜೇಶ್ವರ್ ನೇತೃತ್ವದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿ ಉತ್ಖನನ ನಡೆಯಲಿದೆ. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</p>.<p><strong>ಲಕ್ಕುಂಡಿಯದ್ದು ಶ್ರೀಮಂತ ಇತಿಹಾಸ</strong>: <strong>ಸಚಿವ</strong></p><p> ‘ಉತ್ಖನನ ಪ್ರಾರಂಭಿಸಲು ಬಿಸಿಲು ಇರಬೇಕು. ಹಾಗಾಗಿ ಮಳೆಗಾಲ ಮುಗಿದ ಬಳಿಕ ಉತ್ಖನನ ಆರಂಭಿಸುವುದಾಗಿ ತಜ್ಞರು ತಿಳಿಸಿದ್ದರು. ಅದರಂತೆ ಶುಕ್ರವಾರದಿಂದ ಉತ್ಖನನ ಕೆಲಸ ಪ್ರಾರಂಭವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.</p><p> ‘ಲಕ್ಕುಂಡಿ ನಮ್ಮ ಜಿಲ್ಲೆಯ ವಿಶೇಷ ಸ್ಥಳ. ಅಲ್ಲಿ 101 ಗುಡಿ 101 ಬಾವಿ ಇದ್ದು ಇಲ್ಲಿನ ಇತಿಹಾಸ ಶ್ರೀಮಂತವಾಗಿದೆ’ ಎಂದಿದ್ದಾರೆ. ‘ಪ್ರತಿ ಮಳೆಗೂ ಈ ಊರಿನ ಮಣ್ಣಿನಲ್ಲಿ ಸ್ವಲ್ಪ ಬಂಗಾರ ಹವಳ ಅಥವಾ ಬೇರೆ ಇನ್ಯಾವುದಾದರೂ ಅಮೂಲ್ಯ ವಸ್ತುಗಳು ಸಿಗುತ್ತಿದ್ದವು. ಆದರೆ ಜ.10ರಂದು ಇಲ್ಲಿ ನಿಧಿ ಸಿಕ್ಕ ಕಾರಣಕ್ಕೆ ಹೆಚ್ಚಿನ ಲಕ್ಷ್ಯ ಕೊಡಲಾಯಿತು. ಅದಕ್ಕಿಂತಲೂ ದೊಡ್ಡ ಸಂಪತ್ತು ಅಂದರೆ ಅಲ್ಲಿನ ಶಿಲ್ಪಕಲಾಕೃತಿಗಳು ಶಾಸನಗಳು. ಈ ಗ್ರಾಮದ ಮಹತ್ವವನ್ನು ಜಗತ್ತಿಗೆ ತಿಳಿಸುವ ನಿರ್ಣಯವನ್ನು ಸರ್ಕಾರ ಮಾಡಿದ್ದು ವಿಶ್ವದ ಪಾರಂಪರಿಕ ಸ್ಥಳ ಮಾಡಲು ಪ್ರಯತ್ನ ನಡೆಸಿದೆ’ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಎಂ.ಸತೀಶ್ ಬೆಳ್ಳಕ್ಕಿ</p>.<p><strong>ಗದಗ</strong>: ನಿಧಿ ಸಿಕ್ಕ ನಂತರ ರಾಜ್ಯದ ಗಮನ ಸೆಳೆದಿದ್ದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಪ್ರಕ್ರಿಯೆ ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಜ.16ರಂದು ಉತ್ಖನನಕ್ಕೆ ಅಧಿಕೃತವಾಗಿ ಚಾಲನೆ ಸಿಗುತ್ತಿದ್ದು, ನಾಲ್ಕು ತಿಂಗಳು ನಡೆಯಲಿದೆ.</p>.<p>ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ವರ್ಷ ಜೂನ್ 3ರಂದು ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಿದ್ದರು.</p>.<p>‘ಚಾಲುಕ್ಯರು, ಹೊಯ್ಸಳರು, ವಿಜಯನಗರ, ಮೈಸೂರು ಸಂಸ್ಥಾನ ಸೇರಿದಂತೆ ಹಿಂದಿನ ಕಾಲದ ಸಾಂಸ್ಕೃತಿಕ ಸಂಪತ್ತು ಉಳಿಸಿಕೊಳ್ಳುವುದು ಅವಶ್ಯಕ. ಲಕ್ಕುಂಡಿಯಲ್ಲಿ ನಡೆದಿರುವ ಮಾದರಿಯಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ಆರಂಭಿಸಲಾಗುವುದು. ದೇವಸ್ಥಾನಗಳ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಸಿಎಂ ಹೇಳಿದ್ದರು.</p>.<p>ಆದರೆ, ಆರು ತಿಂಗಳಾದರೂ ಉತ್ಖನನ ಆರಂಭಗೊಂಡಿರಲಿಲ್ಲ. ಉತ್ಖನನ ಮಾಡಲು ಭೂಮಿ ಒಣಗಿರಬೇಕು. ನಿರಂತರ ಮಳೆ ಸುರಿದಿದ್ದರಿಂದಾಗಿ ತಜ್ಞರು ಈ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದಿದ್ದರು. ಇದರ ಜತೆಗೆ, ಉತ್ಖನನಕ್ಕೆ ಗುರುತಿಸಿದ್ದ ಜಾಗದ ಪಕ್ಕದಲ್ಲಿನ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿ, ಒಪ್ಪಿಗೆ ಸಿಕ್ಕ ನಂತರ ಖಾಲಿ ಜಾಗ ಮತ್ತು ಕಟ್ಟಡವನ್ನು ₹50 ಲಕ್ಷಕ್ಕೆ ಖರೀದಿಸಲು ಸರ್ಕಾರ ಆದೇಶಿಸಿತ್ತು. ಈಗ ಭಾರತೀಯ ಪುರಾತತ್ವ ಇಲಾಖೆಯ ಪರಿಶೋಧನೆ ಮತ್ತು ಉತ್ಖನನ ವಿಭಾಗವು ಉತ್ಖನನಕ್ಕೆ ಅನುಮತಿ ನೀಡಿದ್ದರಿಂದ ಉತ್ಖನನ ಕೆಲಸ ಆರಂಭಗೊಳ್ಳಲಿದೆ. </p>.<p>‘ಲಕ್ಕುಂಡಿಯಲ್ಲಿ ಈ ಹಿಂದೆ 2023–04ರಲ್ಲಿ ಡಾ. ಅ.ಸುಂದರ್ ನೇತೃತ್ವದಲ್ಲಿ ಉತ್ಖನನ ನಡೆದಿತ್ತು. ಈ ಸಂದರ್ಭದಲ್ಲಿ ಲಕ್ಕುಂಡಿ ಕೇವಲ ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ವಿಜಯನಗರ ಆಳ್ವಿಕೆಯಲ್ಲಷ್ಟೇ ಪ್ರಮುಖ ಕೇಂದ್ರವಾಗಿರಲಿಲ್ಲ ಎಂಬುದು ಗೊತ್ತಾಗಿತ್ತು’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. </p>.<p>‘ಲಕ್ಕುಂಡಿಯಲ್ಲಿ ಜನವರಿ 10ರಂದು ಚಿನ್ನದ ನಿಧಿ ಸಿಕ್ಕಿತ್ತು. ಹೀಗಾಗಿ, ಇಂದಿನಿಂದ ಆರಂಭಗೊಳ್ಳುವ ಉತ್ಖನನ ವಿಶೇಷ ಮಹತ್ವ ಪಡೆದಿದೆ. ಇದಕ್ಕೆ ಪೂರಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಮುಗಿದಿದೆ. ಉತ್ಖನನಕ್ಕೆ ಬೇಕಿರುವ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. </p>.<p>ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರ ಬಾವಿ ಮಧ್ಯೆ ಗುರುತಿಸಿರುವ 10 ಮೀಟರ್ ಉದ್ದ 10 ಮೀಟರ್ ಅಗಲದ ಜಾಗದಲ್ಲಿ ಉತ್ಖನನ ನಡೆಯಲಿದೆ. ಇದಕ್ಕಾಗಿ ₹25 ಲಕ್ಷ ಹಣ ಬಿಡುಗಡೆಯಾಗಿದೆ. ಈ ಜಾಗ ಜ.10ರಂದು ಬಾಲಕನಿಗೆ ನಿಧಿ ದೊರೆತ ಸ್ಥಳದಿಂದ ತುಂಬ ಹತ್ತಿರದಲ್ಲೇ ಇದೆ. ಜತೆಗೆ ವೀರಭದ್ರೇಶ್ವರ ಗುಡಿಯಿಂದ ಸ್ವಲ್ಪ ದೂರದಲ್ಲೇ ಟಂಕಶಾಲೆ ಇತ್ತು ಎನ್ನಲಾಗಿದೆ. ಹಾಗಾಗಿ, ಈಗ ನಡೆಯುವ ಉತ್ಖನನದಿಂದ ಏನೆಲ್ಲಾ ವಸ್ತುಗಳು ಸಿಗಬಹುದು ಎಂಬ ಕುತೂಹಲ ಗರಿಗೆದರಿದೆ.</p>.<p>Quote - ಡಾ. ಟಿ.ಎಂ.ಕೇಶವ್ ಮತ್ತು ಡಾ. ಆರ್.ಶೇಜೇಶ್ವರ್ ನೇತೃತ್ವದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿ ಉತ್ಖನನ ನಡೆಯಲಿದೆ. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ</p>.<p><strong>ಲಕ್ಕುಂಡಿಯದ್ದು ಶ್ರೀಮಂತ ಇತಿಹಾಸ</strong>: <strong>ಸಚಿವ</strong></p><p> ‘ಉತ್ಖನನ ಪ್ರಾರಂಭಿಸಲು ಬಿಸಿಲು ಇರಬೇಕು. ಹಾಗಾಗಿ ಮಳೆಗಾಲ ಮುಗಿದ ಬಳಿಕ ಉತ್ಖನನ ಆರಂಭಿಸುವುದಾಗಿ ತಜ್ಞರು ತಿಳಿಸಿದ್ದರು. ಅದರಂತೆ ಶುಕ್ರವಾರದಿಂದ ಉತ್ಖನನ ಕೆಲಸ ಪ್ರಾರಂಭವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.</p><p> ‘ಲಕ್ಕುಂಡಿ ನಮ್ಮ ಜಿಲ್ಲೆಯ ವಿಶೇಷ ಸ್ಥಳ. ಅಲ್ಲಿ 101 ಗುಡಿ 101 ಬಾವಿ ಇದ್ದು ಇಲ್ಲಿನ ಇತಿಹಾಸ ಶ್ರೀಮಂತವಾಗಿದೆ’ ಎಂದಿದ್ದಾರೆ. ‘ಪ್ರತಿ ಮಳೆಗೂ ಈ ಊರಿನ ಮಣ್ಣಿನಲ್ಲಿ ಸ್ವಲ್ಪ ಬಂಗಾರ ಹವಳ ಅಥವಾ ಬೇರೆ ಇನ್ಯಾವುದಾದರೂ ಅಮೂಲ್ಯ ವಸ್ತುಗಳು ಸಿಗುತ್ತಿದ್ದವು. ಆದರೆ ಜ.10ರಂದು ಇಲ್ಲಿ ನಿಧಿ ಸಿಕ್ಕ ಕಾರಣಕ್ಕೆ ಹೆಚ್ಚಿನ ಲಕ್ಷ್ಯ ಕೊಡಲಾಯಿತು. ಅದಕ್ಕಿಂತಲೂ ದೊಡ್ಡ ಸಂಪತ್ತು ಅಂದರೆ ಅಲ್ಲಿನ ಶಿಲ್ಪಕಲಾಕೃತಿಗಳು ಶಾಸನಗಳು. ಈ ಗ್ರಾಮದ ಮಹತ್ವವನ್ನು ಜಗತ್ತಿಗೆ ತಿಳಿಸುವ ನಿರ್ಣಯವನ್ನು ಸರ್ಕಾರ ಮಾಡಿದ್ದು ವಿಶ್ವದ ಪಾರಂಪರಿಕ ಸ್ಥಳ ಮಾಡಲು ಪ್ರಯತ್ನ ನಡೆಸಿದೆ’ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>