ಇದೇ ಸಂದರ್ಭದಲ್ಲಿ ಸೋಬರದಮಠ ಅವರು, ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಬೇಕು, ಮಲಪ್ರಭಾ ನದಿ ಹೂಳೆತ್ತಬೇಕು, ನೀರಾವರಿ ಇಲಾಖೆಯ ಕಳಪೆ ಕಾಮಗಾರಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, ವಿದ್ಯುತ್ ಕನಿಷ್ಠ ದರ ವಸೂಲಿ ನಿಲ್ಲಿಸಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದದಿಂದ ತೆಗೆದುಕೊಂಡ ಸಾಲವನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಒಂದು ಬಾರಿ ಮನ್ನಾ ಮಾಡಬೇಕು, ಮಹದಾಯಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂಬ ಆರು ನಿರ್ಣಯಗಳನ್ನು ಪ್ರಕಟಿಸಿದರು.