<p><strong>ಮುಂಡರಗಿ</strong>: ‘ದೇಶ ರಕ್ಷಣೆಗೆ ನಮ್ಮ ಸೈನಿಕರು ನೀಡಿದ ಬಲಿದಾನ ಅಮರವಾಗಿದ್ದು, ಅವರ ತ್ಯಾಗ, ಬಲಿದಾನಗಳಿಂದ ದೇಶದ ಜನತೆ ಸುರಕ್ಷಿತವಾಗಿದ್ದಾರೆ. ದೇಶಕ್ಕೋಸ್ಕರ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು’ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ ಹೇಳಿದರು.</p>.<p>ಮಾಜಿ ಸೈನಿಕರ ಸಂಘವು ಭಾನುವಾರ ಸಂಜೆ ತಾಲ್ಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಬಳಿ ಹಮ್ಮಿಕೊಂಡಿದ್ದ ಪುಲ್ವಾಮಾ ಹುತಾತ್ಮರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಸುಭದ್ರತೆಗೆ ಧಕ್ಕೆ ತರುಲು ಪ್ರಯತ್ನಿಸುವವರನ್ನು ಸೆದೆ ಬಡಿಯುವ ಮೂಲಕ ನಮ್ಮ ಸೈನಿಕರು ದೇಶವನ್ನು ಸಂರಕ್ಷಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಮಾಜಿ ಸೈನಿಕರೆಲ್ಲ ಸೇರಿ ದೇಶದ ಏಕತೆ, ಅಖಂಡತೆ ಹಾಗೂ ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ‘ಭಾರತ ಮಾತಾ ಕಿ ಜೈ’, ‘ಒಂದೇ ಮಾತರಂ’, ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು.</p>.<p>ಮಾಜಿ ಸೈನಿಕರಾದ ರೈವಣಸಿದ್ದಯ್ಯ ಮುನವಳ್ಳಿಮಠ, ರಾಘವೇಂದ್ರ ಹಡಪದ, ಕೃಷ್ಣಾ ಕಟ್ಟೇಣ್ಣವರ, ಹನಮಂತಪ್ಪ ಮೇಗುರ, ಮಳ್ಳಪ್ಪ ಆದಮ್ಮನವರ, ಕಾಶಿಮಲಿ ಬೆನಕೊಪ್ಪ, ಭೀಮಪ್ಪ ಪೂಜಾರ, ಈರಪ್ಪ ಹೊಂಬಳ ಇದ್ದರು.</p>
<p><strong>ಮುಂಡರಗಿ</strong>: ‘ದೇಶ ರಕ್ಷಣೆಗೆ ನಮ್ಮ ಸೈನಿಕರು ನೀಡಿದ ಬಲಿದಾನ ಅಮರವಾಗಿದ್ದು, ಅವರ ತ್ಯಾಗ, ಬಲಿದಾನಗಳಿಂದ ದೇಶದ ಜನತೆ ಸುರಕ್ಷಿತವಾಗಿದ್ದಾರೆ. ದೇಶಕ್ಕೋಸ್ಕರ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು’ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ ಹೇಳಿದರು.</p>.<p>ಮಾಜಿ ಸೈನಿಕರ ಸಂಘವು ಭಾನುವಾರ ಸಂಜೆ ತಾಲ್ಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಬಳಿ ಹಮ್ಮಿಕೊಂಡಿದ್ದ ಪುಲ್ವಾಮಾ ಹುತಾತ್ಮರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಸುಭದ್ರತೆಗೆ ಧಕ್ಕೆ ತರುಲು ಪ್ರಯತ್ನಿಸುವವರನ್ನು ಸೆದೆ ಬಡಿಯುವ ಮೂಲಕ ನಮ್ಮ ಸೈನಿಕರು ದೇಶವನ್ನು ಸಂರಕ್ಷಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಮಾಜಿ ಸೈನಿಕರೆಲ್ಲ ಸೇರಿ ದೇಶದ ಏಕತೆ, ಅಖಂಡತೆ ಹಾಗೂ ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ‘ಭಾರತ ಮಾತಾ ಕಿ ಜೈ’, ‘ಒಂದೇ ಮಾತರಂ’, ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು.</p>.<p>ಮಾಜಿ ಸೈನಿಕರಾದ ರೈವಣಸಿದ್ದಯ್ಯ ಮುನವಳ್ಳಿಮಠ, ರಾಘವೇಂದ್ರ ಹಡಪದ, ಕೃಷ್ಣಾ ಕಟ್ಟೇಣ್ಣವರ, ಹನಮಂತಪ್ಪ ಮೇಗುರ, ಮಳ್ಳಪ್ಪ ಆದಮ್ಮನವರ, ಕಾಶಿಮಲಿ ಬೆನಕೊಪ್ಪ, ಭೀಮಪ್ಪ ಪೂಜಾರ, ಈರಪ್ಪ ಹೊಂಬಳ ಇದ್ದರು.</p>