ಈ ವರ್ಷ ಮೀಸಲಾತಿ ಬದಲಾವಣೆಯಾಗಿದ್ದು, ಪುನಾರಾಯ್ಕೆ ಬಯಸಿದ ಆಕಾಂಕ್ಷಿಗಳಿಗೆ ತುಸು ಹಿನ್ನೆಡೆಯಾಗಿದೆ. ತಮ್ಮ ವಾರ್ಡ್ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಆಕಾಂಕ್ಷಿಗಳಿಗೆ ತೀವ್ರ ಬೇಸರವಾಗಿದ್ದು, ಬೇರೆ ವಾರ್ಡ್ಲ್ಲಿ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಉರಿ ಬಿಸಿಲಿನಲ್ಲೂ ಪುರಸಭೆ ಚುನಾವಣೆ ಚರ್ಚೆ ಅರಳಿಕಟ್ಟೆಗಳ ಮೇಲೆ, ದೇವಸ್ಥಾನಗಳಲ್ಲಿ, ಬಯಲಲ್ಲಿ ಹೆಚ್ಚಿನ ಚರ್ಚೆ ನಡೆದಿದೆ.