ಪತ್ರಕರ್ತರನ್ನು ಆಹ್ವಾನಿಸುವುದು ಬೇಡವೆಂದು ನಾನು ಎಲ್ಲೂ ಹೇಳಿಲ್ಲ. ಆದರೆ ಪತ್ರಕರ್ತರು ಒಂದಕ್ಕೆ ಎರಡು ಬರೆಯುತ್ತಾರೆ ಎಂದು ಮುಖ್ಯಾಧಿಕಾರಿಗಳೇ ಬೇಡ ಎಂದರು
-ಫಕೀರಪ್ಪ ಮಳ್ಳಿ ಅಧ್ಯಕ್ಷ
ಪ್ರತಿಬಾರಿಯಂತೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಎಂದುಕೊಂಡು ಸುಮ್ಮನಿದ್ದೆ. ಆದರೆ ಸಭೆಗೆ ಕರೆದಿಲ್ಲವೆಂದು ಸಭೆ ಮುಗಿದ ಬಳಿಕ ಗೊತ್ತಾಗಿದೆ
-ಕುಮಾರಸ್ವಾಮಿ, ಕೋರಧಾನ್ಯಮಠ ಉಪಾಧ್ಯಕ್ಷ
ಪತ್ರಕರ್ತರನ್ನು ಸಭೆಗೆ ಆಹ್ವಾನಿಸುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಾಗ ಇದೇನು ಮುಗಿದು ಹೋಗುತ್ತದೆ ಮುಂದೆ ಕರೆಯೋಕೆ ಬರುತ್ತದೆ. ಈ ಸಭೆ ಮುಗಿದ ಬಳಿಕ ನಾನೇ ಪತ್ರಿಕಾ ಪ್ರಕಟಣೆ ನೀಡುತ್ತೇನೆ. ಹೀಗಾಗಿ ಆಹ್ವಾನಿಸುವುದು ಬೇಡ ಎಂದು ಸಲಹೆ ನೀಡಿದರು