ಹೊಳೆಆಲೂರ ಭಾಗದಲ್ಲಿ ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರವಾದ ನವ ಗ್ರಾಮಗಳು ಹಲವಾರು ಸಮಸ್ಯೆಗಳಿಗೆ ತುತ್ತಾಗಿ ವರ್ಷಗಳೇ ಕಳೆದರೂ ಆಡಳಿತ ವ್ಯವಸ್ಥೆಗೆ ಮಾತ್ರ ಕಾಣದಿರುವುದು ದುರದೃಷ್ಟಕರ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಮನೆ ಹಂಚಿಕೆ ಪ್ರಕ್ರಿಯೆ ಈಚೆಗೆ ಪೂರ್ಣಗೊಂಡಿದೆ. ಆದರೆ, ಶಿಥಿಲಗೊಂಡು ಹಾಳು ಕೊಂಪೆಯಂತಾಗಿದ್ದ ಮನೆಗಳನ್ನೇ ಹಂಚಿಕೆ ಮಾಡಿ ಕೈತೊಳೆದುಕೊಳ್ಳಲಾಗಿದೆ. ಯಾವುದೇ ಅಧಿಕಾರಿಗಳು ತಿರುಗಿಯೂ ನೋಡಿಲ್ಲ ಎಂದು ಸ್ಥಳೀಯರು ಅಲವತ್ತು
ಕೊಂಡಿದ್ದಾರೆ.