ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಇಂದಿಗೂ ಎಷ್ಟೋ ಮಂದಿ ಬಡವರಿಗೆ ಕನಿಷ್ಠ ಸೌಕರ್ಯಗಳು ಸಿಗುತ್ತಿಲ್ಲ. ಹಾಗಾಗಿ ಶೌಚಾಲಯ, ಸ್ನಾನಗೃಹ, ವಾಷಿಂಗ್ ಮಷಿನ್, ಹೇರ್ ಡ್ರಯರ್ನಂತಹ ಸೌಲಭ್ಯಗಳನ್ನು ಬಡವರಿಗೆ ಒಂದೇ ಸೂರಿನಡಿ ಒದಗಿಸುವ ಗೌರವ ಘಟಕ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.