<p><strong>ಗದಗ</strong>: ನಗರದ ತೋಂಟದಾರ್ಯ ವಿದ್ಯಾಪೀಠದ ಸದಸ್ಯ, ಜಗದ್ಗುರು ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಹಾಗೂ ವಿ.ಎನ್.ಟಿ ರಸ್ತೆಯ ನಿವಾಸಿ ಶಿವರುದ್ರಪ್ಪ ಎಸ್.ಕಳಸಾಪುರಶೆಟ್ರ (73) ಗುರುವಾರ ನಿಧನರಾದರು.</p>.<p>ಪ್ರಗತಿಪರ ಚಿಂತಕರಾಗಿ ಗದುಗಿನ ಶಿವರುದ್ರಪ್ಪ ಸಿದ್ದಲಿಂಗಪ್ಪ ಕಳಸಾಪುರ ಶೆಟ್ಟರೆಂದರೆ ಗದಗ, ಧಾರವಾಡ ಜಿಲ್ಲೆಗೆ ಚಿರಪರಿಚಿತರು. ಇವರು ಗದುಗಿನ ತೋಂಟದಾರ್ಯ ಶ್ರೀಗಳ ಭಕ್ತರಾಗಿದ್ದರು.</p>.<p>ತೋಂಟದಾರ್ಯ ಜಾತ್ರಾ ಮಹೋತ್ಸವದಂದು ತೋಂಟದಾರ್ಯ ಜಗದ್ಗುರುಗಳು ಪ್ರತಿವರ್ಷ ಕಳಸಾಪೂರ ಶೆಟ್ಟರ ಮನೆಯಲ್ಲಿಯೇ ಪೂಜೆ-ಪ್ರಸಾದ ತೀರಿಸಿಕೊಂಡು ಮಠಕ್ಕೆ ಆಗಮಿಸಿದ ನಂತರ ಮಠದ ತೇರು ಸಾಗುತ್ತಿತ್ತು. ಈ ಪದ್ಧತಿ ಸುಮಾರು 250 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮನೆತನದವರು ಈ ಪರಂಪರೆಯನ್ನು ಬಹಳ ಭಕ್ತಿ-ಶ್ರದ್ಧೆ-ಅಭಿಮಾನದಿಂದ ನಡೆಸಿಕೊಂಡು ಬಂದಿದ್ದಾರೆ. </p>.<p>ಮೃತರ ಅಂತ್ಯಕ್ರಿಯೆ ಮುಂಡರಗಿ ಪಟ್ಟಣದ ಸಮೀಪದ ಅಳವಂಡಿ ರಸ್ತೆಗೆ ಹೊಂದಿರುವ ಹಟ್ಟಿ ಗ್ರಾಮದ ಅವರ ಸ್ವಂತ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ನೆರವೇರಲಿದೆ. </p>.<p>ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ನಗರದ ತೋಂಟದಾರ್ಯ ವಿದ್ಯಾಪೀಠದ ಸದಸ್ಯ, ಜಗದ್ಗುರು ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಹಾಗೂ ವಿ.ಎನ್.ಟಿ ರಸ್ತೆಯ ನಿವಾಸಿ ಶಿವರುದ್ರಪ್ಪ ಎಸ್.ಕಳಸಾಪುರಶೆಟ್ರ (73) ಗುರುವಾರ ನಿಧನರಾದರು.</p>.<p>ಪ್ರಗತಿಪರ ಚಿಂತಕರಾಗಿ ಗದುಗಿನ ಶಿವರುದ್ರಪ್ಪ ಸಿದ್ದಲಿಂಗಪ್ಪ ಕಳಸಾಪುರ ಶೆಟ್ಟರೆಂದರೆ ಗದಗ, ಧಾರವಾಡ ಜಿಲ್ಲೆಗೆ ಚಿರಪರಿಚಿತರು. ಇವರು ಗದುಗಿನ ತೋಂಟದಾರ್ಯ ಶ್ರೀಗಳ ಭಕ್ತರಾಗಿದ್ದರು.</p>.<p>ತೋಂಟದಾರ್ಯ ಜಾತ್ರಾ ಮಹೋತ್ಸವದಂದು ತೋಂಟದಾರ್ಯ ಜಗದ್ಗುರುಗಳು ಪ್ರತಿವರ್ಷ ಕಳಸಾಪೂರ ಶೆಟ್ಟರ ಮನೆಯಲ್ಲಿಯೇ ಪೂಜೆ-ಪ್ರಸಾದ ತೀರಿಸಿಕೊಂಡು ಮಠಕ್ಕೆ ಆಗಮಿಸಿದ ನಂತರ ಮಠದ ತೇರು ಸಾಗುತ್ತಿತ್ತು. ಈ ಪದ್ಧತಿ ಸುಮಾರು 250 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮನೆತನದವರು ಈ ಪರಂಪರೆಯನ್ನು ಬಹಳ ಭಕ್ತಿ-ಶ್ರದ್ಧೆ-ಅಭಿಮಾನದಿಂದ ನಡೆಸಿಕೊಂಡು ಬಂದಿದ್ದಾರೆ. </p>.<p>ಮೃತರ ಅಂತ್ಯಕ್ರಿಯೆ ಮುಂಡರಗಿ ಪಟ್ಟಣದ ಸಮೀಪದ ಅಳವಂಡಿ ರಸ್ತೆಗೆ ಹೊಂದಿರುವ ಹಟ್ಟಿ ಗ್ರಾಮದ ಅವರ ಸ್ವಂತ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ನೆರವೇರಲಿದೆ. </p>.<p>ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>