ತಕ್ಷಣ ಸ್ಥಳದಲ್ಲಿದ್ದ ಡಿ.ಡಿ.ಪಿ.ಐ. ಜಿ.ಎಂ.ಬಸವಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಅಣ್ಣಿಗೇರಿ, ಆರ್.ಎಲ್.ಬದಾಮಿ, ಭಾಗ್ಯಲಕ್ಷ್ಮಿ ಇನಾಮತಿ, ಎಚ್.ವೈ.ಭಜಂತ್ರಿ ವಿದ್ಯಾರ್ಥಿನಿಯ ಬಳಿಗೆ ದೌಡಾಯಿಸಿದರು. ಅಲ್ಲಿಯೇ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಡಿ.ಡಿ.ಪಿ.ಐ. ಅವರು ಬಾಲಕಿಗೆ ಉಪಾಹಾರದ ವ್ಯವಸ್ಥೆ ಮಾಡಿದರು. ನಂತರ ಬಾಲಕಿಯು ಚೇತರಿಸಿಕೊಂಡು ಪರೀಕ್ಷೆಗೆ ಹಾಜರಾದಳು.