‘ಸಿದ್ಧಲಿಂಗಯ್ಯ, ಚಂಪಾ ಅವರನ್ನು ಕಳೆದುಕೊಂಡಾಗ ಕಾಣಿಸದ ಖಾಲಿತನ ಮೂರ್ತಿ ಅವರನ್ನು ಕಳೆದುಕೊಂಡಾಗ ಕಾಡಿತು. ಸಿದ್ಧಲಿಂಗಯ್ಯ, ಚಂಪಾ ದಿಟ್ಟ ಹೋರಾಟಗಾರರಾದರೂ ಅವರ ಆಳದ ಬೇರುಗಳು ಈ ವ್ಯವಸ್ಥೆಯ ಜತೆಗೆ ಇದ್ದವು. ಸ್ವ ಹಿತಾಸಕ್ತಿಗಳೇ ಪ್ರಧಾನವಾಗಿ, ಸಮುದಾಯದ ಹಿತಾಸಕ್ತಿಗಳು ಕಡೆಗಣನೆಯಾಗಿದ್ದವು. ಆದರೂ ಅವರಿಬ್ಬರ ಮೂಲಚೇತನ ಹೋರಾಟವೇ ಆಗಿದ್ದರಿಂದ ಅವರ ಬಗ್ಗೆ ಗೌರವ ಇದೆ. ಆದರೆ, ಬಿಜಿಎಂ ಕೊನೆವರೆಗೂ ವ್ಯವಸ್ಥೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೇ ವಿರೋಧಿಸಿಕೊಂಡೇ ಬದುಕಿದರು. ಇದು ಅವರ ಶಕ್ತಿಯಾಗಿತ್ತು’ ಎಂದರು.