ರಥೋತ್ಸವಕ್ಕೂ ತೋಂಟದ ಸಿದ್ಧರಾಮ ಶ್ರೀಗಳ ಮೆರವಣಿಗೆ ನಡೆಯಿತು. ಎಸ್.ಎಸ್. ಕಳಸಾಪೂರ ಶೆಟ್ಟರ ಮನೆಯಿಂದ ಆರಂಭವಾದ ಮೆರವಣಿಗೆ ಸರಾಫ್ ಬಜಾರ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣ ರಾವ್ ವೃತ್ತ, ಮಹೇಂದ್ರಕರ್ ವೃತ್ತದ ಮೂಲಕ ಮಠಕ್ಕೆ ಬಂದು ತಲುಪಿತು. ಜಾಂಜ್ ಮೇಳ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ಮೇಳಗಳು, ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.