ಲಾಕ್ಡೌನ್ ಘೋಷಣೆಯಾದ ನಂತರ, ತುಂಗಭದ್ರಾ ನದಿದಂಡೆಯ ಮೇಲಿದ್ದ ಹಲವು ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಮರಳು ಅಕ್ರಮ ಸಾಗಾಣೆಗೆ ಕಡಿವಾಣ ಬಿದ್ದಿತ್ತು. ನದಿ ದಂಡೆಯ ಮೇಲಿನ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಒಂದೂವರೆ ತಿಂಗಳು ತುಂಗಭದ್ರಾ ನದಿಯಲ್ಲಿ ಮಾನವ ಹಸ್ತಕ್ಷೇಪ ಸಂಪೂರ್ಣ ನಿಂತಿದ್ದರಿಂದ, ಈಗ ನದಿ ನೀರು ಸ್ವಚ್ಛ, ಶುಭ್ರವಾಗಿದೆ. ಜುಳು ಜುಳು ಹರಿಯುವ ನೀರಿನಲ್ಲಿ ಮೀನುಗಳು, ಇತರೆ ಜಲಚರಗಳು ನೆಮ್ಮದಿಯಿಂದ ಉಸಿರಾಡುತ್ತಿವೆ.