<p><strong>ಗದಗ</strong>: ಕೇವಲ ಆಟ- ಸಾಮೂಹಿಕ ವಿವಾಹಗಳಿಗಷ್ಟೇ ಸೀಮಿತವಾಗಿದ್ದ ವಿದ್ಯಾದಾನ ಸಮಿತಿ ಮೈದಾನ ಕಳೆದ ಎರಡು ದಿನಗಳಿಂದ ಹೊಸದೊಂದು `ಪರ್ವ~ಕ್ಕೆ ವೇದಿಕೆಯಾಗಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಕೈಗೊಂಡಿದ್ದ ಉಪವಾಸ ಕೇವಲ ಉಪವಾಸವಾಗಿರಲಿಲ್ಲ. ಅಲ್ಲಿ ವಿವಿಧ ವಿಷಯಗಳು ಸಮ್ಮಿಳಿತಗೊಂಡಿದ್ದವು.<br /> <br /> <strong>ಯೋಗ ಪ್ರದರ್ಶನ</strong><br /> ಮುಂಜಾನೆ ಆರು ಗಂಟೆಗೆ ವೇದಿಕೆಯಲ್ಲಿ ಯೋಗಾ ಪ್ರದರ್ಶನ ಆರಂಭವಾಯಿತು. ಋಷಿಕೇಶದ ವಚನಾನಂದ ಸ್ವಾಮೀಜಿ ಅವರು ಅನೇಕ ಆಸನಗಳನ್ನು ಮಾಡಿ ತೋರಿಸಿದರು. ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಬಿ.ಶ್ರೀರಾಮುಲು ಅಭಿಮಾನಿಗಳು ಸ್ವಾಮೀಜಿ ಹೇಳಿಕೊಟ್ಟಂತೆ ಮಾಡಿ ತೋರಿಸಿದರು.<br /> <br /> ಮಧುಮೇಹ ಇರುವವರು ಯಾವ ರೀತಿ ಮುನ್ನಚ್ಚರಿಕೆ ಕ್ರಮ ಅನುಸರಿಸ ಬೇಕು. ವ್ಯಾಯಾಮ ಹೇಗೆ ಮಾಡ ಬೇಕು. ಆಹಾರ ಪದ್ಧತಿ, ಜೀವನಶೈಲಿ ಹೇಗಿರಬೇಕು ಎಂದು ಸ್ವಾಮೀಜಿ ತಿಳಿಸಿಕೊಟ್ಟರಲ್ಲದೇ ಮಧುಮೇಹಿಗಳಿಗೆ ಅನುಕೂಲವಾಗಿ ರುವ ಆಸನಗಳನ್ನು ಪ್ರದರ್ಶಿಸಿದರು.<br /> <br /> ಇದಲ್ಲದೇ ಅಸ್ತಮಾ ರೋಗಿಗಳು ಯಾವ ರೀತಿ ಜೀವನಶೈಲಿ- ಆಹಾರಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿಕೊಟ್ಟರು. ಬಳಿಕ, ಮುಂಜಾನೆಯಿಂದಲೇ ಮನಸ್ಸು ಪ್ರಫುಲ್ಲವಾಗಿರಲು ನಮ್ಮ ಅಂಗಾಂಗಳಿಗೆ ಸಣ್ಣ ಪ್ರಮಾಣದ ವ್ಯಾಯಾಮ ನೀಡಬೇಕು ಎಂದು ಕಿವಿಮಾತನ್ನು ಹೇಳಿದರು.<br /> <br /> ಸುಮಾರು ಒಂದು ತಾಸಿಗೂ ಅಧಿಕ ಸಮಯ ಯೋಗಾಸನ ಸಾಂಗೋಪ ವಾಗಿ ನಡೆಯಿತು. ಇದಾದ ಬಳಿಕ ಬಳ್ಳಾರಿಯ ಕೆಲ ಮಹಿಳೆಯರು `ಹನುಮಾನ ಚಾಲೀಸ್~ಪಠಿಸಿದರು.<br /> <br /> ಮತ್ತೆ ಮಧ್ಯಾಹ್ನದವರೆಗೂ ವಿವಿಧ ಮುಖಂಡರ ಭಾಷಣ ನಡೆಯಿತು. ಮಧ್ಯ-ಮಧ್ಯ ಹಾಡು-ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.<br /> <br /> <strong>ವೇದಿಕೆಯಲ್ಲೇ ನಮಾಜ್</strong><br /> ಶ್ರೀರಾಮುಲುವಿಗೆ ಬೆಂಬಲ ನೀಡಿ ಉಪವಾಸ ಕಾರ್ಯಕ್ರಮದಲ್ಲಿ ಭಾಗವ ಹಿಸಿದ್ದ ಮುಸ್ಲಿಂ ಬಾಂಧವರು ವೇದಿಕೆ ಮುಂಭಾಗದಲ್ಲಿಯೇ ಮಧ್ಯಾಹ್ನ ದ ಪ್ರಾರ್ಥನೆ ಸಲ್ಲಿಸಿದರು.<br /> <br /> ಕೊಲ್ಕತ್ತಾದಿಂದ ಬಂದಿದ್ದ ಉಲ್ಮಾ ಫೆಡರೇಶನ್ ಅಧ್ಯಕ್ಷ ಅಬು ತಾಲಿಬ್-ಎ-ರೆಹಮಾನಿ ನೇತೃತ್ವದಲ್ಲಿ ಅನೇಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡಿದರು.<br /> <br /> <strong>ಕುತೂಹಲ ಮೂಡಿಸಿದ ಹೊರಟ್ಟಿ ಆಗಮನ</strong><br /> ಶ್ರೀರಾಮುಲು ಅವರ ಉಪವಾಸಕ್ಕೆ ಬೆಂಬಲ ವ್ಯಕ್ತಪಡಿಸಲು ದೂರದ ಬೆಂಗಳೂರಿನಿಂದ ನೇರವಾಗಿ ಗದುಗಿಗೆ ಬಂದ ಮಾಜಿ ಶಿಕ್ಷಣ ಸಚಿವ ಬಸವರಾಜಹೊರಟ್ಟಿಯ ನಡೆ ನೆರೆದಿದ್ದ ಸಭಿಕರು ಹಾಗೂ ಶ್ರೀರಾಮುಲು ಬೆಂಬಲಿಗರಲ್ಲಿ ಕುತೂಹಲ ಹಾಗೂ ಆಶ್ವರ್ಯ ಮೂಡಿಸಿತು.<br /> <br /> ಪ್ರಾದೇಶಿಕ ಪಕ್ಷಗಳು ಒಂದಾಗಿ ರಾಷ್ಟ್ರೀಯ ಪಕ್ಷಗಳನ್ನು ಎದುರಿಸೋಣ ಎನ್ನುವ ಸಂದೇಶವನ್ನು `ಗೌಡ~ರಿಂದ ಹೊತ್ತು ತಂದಿದ್ದರೋ? ಅಥವಾ ಶ್ರೀರಾಮುಲು ಅವರನ್ನು ಜೆಡಿಎಸ್ಗೆ ಆಹ್ವಾನಿಸಲು `ರಾಯಭಾರ~ ಕೆಲಸ ಮಾಡಿದ್ದರೋ? ಎನ್ನುವ ವಿಷಯ ಅಲ್ಲಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ- ಹರಿದಾಡಿ ಕೆಲ ಹೊತ್ತು ಸಂಚಲನ ಮೂಡಿಸಿತು<br /> <br /> ಸುಮಾರು ಅರ್ಧತಾಸು ವೇದಿಕೆಯ ಮೇಲೆ ಕುಳಿತ್ತಿದ್ದ ಹೊರಟ್ಟಿ ಅವರು ಶ್ರೀರಾಮುಲು ಅವರ ಹೆಗಲಮೇಲೆ ಕೈ ಹಾಕಿಕೊಂಡು ಬಹಳ ಖುಷಿಯಿಂದಲೇ ಮಾತನಾಡುತ್ತಿದ್ದ ದೃಶ್ಯವೂ ಕಂಡು ಬಂತು.<br /> <br /> `ಬೆಂಬಲ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಹೋರಾಟ ನಡೆಸುತ್ತಿರುವುದಿಂದ ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ್ದೇನೆ~ ಎಂದು ಹೊರಟ್ಟಿ ಸ್ಪಷ್ಟನೆಯನ್ನೂ ನೀಡಿದರು.<br /> <br /> <strong>ದುನಿಯಾ ರಶ್ಮಿಗೆ ಉಧೋ-ಉಧೋ </strong><br /> ಮಂಗಳವಾರ ರಕ್ಷಿತಾ ಅವರ ಕ್ರೇಜಿಗೆ ಒಳಗಾಗಿದ್ದ ಜನರು ಬುಧವಾರ `ದುನಿಯಾ~ ರಶ್ಮಿಗೆ ಉಧೋ-ಉಧೋ ಎಂದರು.<br /> <br /> ಬಸವರಾಜ ಹೊರಟ್ಟಿ ಅವರ ಜೊತೆಯಲ್ಲಿ ಬಂದ ರಶ್ಮಿಯನ್ನು ಕಂಡದ್ದೆ ಜನರು ಸಂಭ್ರಮದಿಂದ ಕೇಕೆ ಹಾಕಿದ್ದರು. <br /> <br /> ಎಲ್ಲರೂ ಕೈ ಬೀಸ ತೊಡಗಿದರು. ಜನರಿಂದ ಈ ಪರಿ ಬೆಂಬಲ ಸಿಕ್ಕುತ್ತಿ ರುವುದನ್ನು ಕಂಡ ರಶ್ಮಿ ಕೂಡ ಜನರತ್ತ ಕೈ ಬೀಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದಲ್ಲಿ ಕಂಡು ಬಂತು. ಇದರಿಂದ ಎಲ್ಲರಿಗೂ ಖುಷಿ ಆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ಕೇವಲ ಆಟ- ಸಾಮೂಹಿಕ ವಿವಾಹಗಳಿಗಷ್ಟೇ ಸೀಮಿತವಾಗಿದ್ದ ವಿದ್ಯಾದಾನ ಸಮಿತಿ ಮೈದಾನ ಕಳೆದ ಎರಡು ದಿನಗಳಿಂದ ಹೊಸದೊಂದು `ಪರ್ವ~ಕ್ಕೆ ವೇದಿಕೆಯಾಗಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಕೈಗೊಂಡಿದ್ದ ಉಪವಾಸ ಕೇವಲ ಉಪವಾಸವಾಗಿರಲಿಲ್ಲ. ಅಲ್ಲಿ ವಿವಿಧ ವಿಷಯಗಳು ಸಮ್ಮಿಳಿತಗೊಂಡಿದ್ದವು.<br /> <br /> <strong>ಯೋಗ ಪ್ರದರ್ಶನ</strong><br /> ಮುಂಜಾನೆ ಆರು ಗಂಟೆಗೆ ವೇದಿಕೆಯಲ್ಲಿ ಯೋಗಾ ಪ್ರದರ್ಶನ ಆರಂಭವಾಯಿತು. ಋಷಿಕೇಶದ ವಚನಾನಂದ ಸ್ವಾಮೀಜಿ ಅವರು ಅನೇಕ ಆಸನಗಳನ್ನು ಮಾಡಿ ತೋರಿಸಿದರು. ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಬಿ.ಶ್ರೀರಾಮುಲು ಅಭಿಮಾನಿಗಳು ಸ್ವಾಮೀಜಿ ಹೇಳಿಕೊಟ್ಟಂತೆ ಮಾಡಿ ತೋರಿಸಿದರು.<br /> <br /> ಮಧುಮೇಹ ಇರುವವರು ಯಾವ ರೀತಿ ಮುನ್ನಚ್ಚರಿಕೆ ಕ್ರಮ ಅನುಸರಿಸ ಬೇಕು. ವ್ಯಾಯಾಮ ಹೇಗೆ ಮಾಡ ಬೇಕು. ಆಹಾರ ಪದ್ಧತಿ, ಜೀವನಶೈಲಿ ಹೇಗಿರಬೇಕು ಎಂದು ಸ್ವಾಮೀಜಿ ತಿಳಿಸಿಕೊಟ್ಟರಲ್ಲದೇ ಮಧುಮೇಹಿಗಳಿಗೆ ಅನುಕೂಲವಾಗಿ ರುವ ಆಸನಗಳನ್ನು ಪ್ರದರ್ಶಿಸಿದರು.<br /> <br /> ಇದಲ್ಲದೇ ಅಸ್ತಮಾ ರೋಗಿಗಳು ಯಾವ ರೀತಿ ಜೀವನಶೈಲಿ- ಆಹಾರಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿಕೊಟ್ಟರು. ಬಳಿಕ, ಮುಂಜಾನೆಯಿಂದಲೇ ಮನಸ್ಸು ಪ್ರಫುಲ್ಲವಾಗಿರಲು ನಮ್ಮ ಅಂಗಾಂಗಳಿಗೆ ಸಣ್ಣ ಪ್ರಮಾಣದ ವ್ಯಾಯಾಮ ನೀಡಬೇಕು ಎಂದು ಕಿವಿಮಾತನ್ನು ಹೇಳಿದರು.<br /> <br /> ಸುಮಾರು ಒಂದು ತಾಸಿಗೂ ಅಧಿಕ ಸಮಯ ಯೋಗಾಸನ ಸಾಂಗೋಪ ವಾಗಿ ನಡೆಯಿತು. ಇದಾದ ಬಳಿಕ ಬಳ್ಳಾರಿಯ ಕೆಲ ಮಹಿಳೆಯರು `ಹನುಮಾನ ಚಾಲೀಸ್~ಪಠಿಸಿದರು.<br /> <br /> ಮತ್ತೆ ಮಧ್ಯಾಹ್ನದವರೆಗೂ ವಿವಿಧ ಮುಖಂಡರ ಭಾಷಣ ನಡೆಯಿತು. ಮಧ್ಯ-ಮಧ್ಯ ಹಾಡು-ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.<br /> <br /> <strong>ವೇದಿಕೆಯಲ್ಲೇ ನಮಾಜ್</strong><br /> ಶ್ರೀರಾಮುಲುವಿಗೆ ಬೆಂಬಲ ನೀಡಿ ಉಪವಾಸ ಕಾರ್ಯಕ್ರಮದಲ್ಲಿ ಭಾಗವ ಹಿಸಿದ್ದ ಮುಸ್ಲಿಂ ಬಾಂಧವರು ವೇದಿಕೆ ಮುಂಭಾಗದಲ್ಲಿಯೇ ಮಧ್ಯಾಹ್ನ ದ ಪ್ರಾರ್ಥನೆ ಸಲ್ಲಿಸಿದರು.<br /> <br /> ಕೊಲ್ಕತ್ತಾದಿಂದ ಬಂದಿದ್ದ ಉಲ್ಮಾ ಫೆಡರೇಶನ್ ಅಧ್ಯಕ್ಷ ಅಬು ತಾಲಿಬ್-ಎ-ರೆಹಮಾನಿ ನೇತೃತ್ವದಲ್ಲಿ ಅನೇಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡಿದರು.<br /> <br /> <strong>ಕುತೂಹಲ ಮೂಡಿಸಿದ ಹೊರಟ್ಟಿ ಆಗಮನ</strong><br /> ಶ್ರೀರಾಮುಲು ಅವರ ಉಪವಾಸಕ್ಕೆ ಬೆಂಬಲ ವ್ಯಕ್ತಪಡಿಸಲು ದೂರದ ಬೆಂಗಳೂರಿನಿಂದ ನೇರವಾಗಿ ಗದುಗಿಗೆ ಬಂದ ಮಾಜಿ ಶಿಕ್ಷಣ ಸಚಿವ ಬಸವರಾಜಹೊರಟ್ಟಿಯ ನಡೆ ನೆರೆದಿದ್ದ ಸಭಿಕರು ಹಾಗೂ ಶ್ರೀರಾಮುಲು ಬೆಂಬಲಿಗರಲ್ಲಿ ಕುತೂಹಲ ಹಾಗೂ ಆಶ್ವರ್ಯ ಮೂಡಿಸಿತು.<br /> <br /> ಪ್ರಾದೇಶಿಕ ಪಕ್ಷಗಳು ಒಂದಾಗಿ ರಾಷ್ಟ್ರೀಯ ಪಕ್ಷಗಳನ್ನು ಎದುರಿಸೋಣ ಎನ್ನುವ ಸಂದೇಶವನ್ನು `ಗೌಡ~ರಿಂದ ಹೊತ್ತು ತಂದಿದ್ದರೋ? ಅಥವಾ ಶ್ರೀರಾಮುಲು ಅವರನ್ನು ಜೆಡಿಎಸ್ಗೆ ಆಹ್ವಾನಿಸಲು `ರಾಯಭಾರ~ ಕೆಲಸ ಮಾಡಿದ್ದರೋ? ಎನ್ನುವ ವಿಷಯ ಅಲ್ಲಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ- ಹರಿದಾಡಿ ಕೆಲ ಹೊತ್ತು ಸಂಚಲನ ಮೂಡಿಸಿತು<br /> <br /> ಸುಮಾರು ಅರ್ಧತಾಸು ವೇದಿಕೆಯ ಮೇಲೆ ಕುಳಿತ್ತಿದ್ದ ಹೊರಟ್ಟಿ ಅವರು ಶ್ರೀರಾಮುಲು ಅವರ ಹೆಗಲಮೇಲೆ ಕೈ ಹಾಕಿಕೊಂಡು ಬಹಳ ಖುಷಿಯಿಂದಲೇ ಮಾತನಾಡುತ್ತಿದ್ದ ದೃಶ್ಯವೂ ಕಂಡು ಬಂತು.<br /> <br /> `ಬೆಂಬಲ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಹೋರಾಟ ನಡೆಸುತ್ತಿರುವುದಿಂದ ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ್ದೇನೆ~ ಎಂದು ಹೊರಟ್ಟಿ ಸ್ಪಷ್ಟನೆಯನ್ನೂ ನೀಡಿದರು.<br /> <br /> <strong>ದುನಿಯಾ ರಶ್ಮಿಗೆ ಉಧೋ-ಉಧೋ </strong><br /> ಮಂಗಳವಾರ ರಕ್ಷಿತಾ ಅವರ ಕ್ರೇಜಿಗೆ ಒಳಗಾಗಿದ್ದ ಜನರು ಬುಧವಾರ `ದುನಿಯಾ~ ರಶ್ಮಿಗೆ ಉಧೋ-ಉಧೋ ಎಂದರು.<br /> <br /> ಬಸವರಾಜ ಹೊರಟ್ಟಿ ಅವರ ಜೊತೆಯಲ್ಲಿ ಬಂದ ರಶ್ಮಿಯನ್ನು ಕಂಡದ್ದೆ ಜನರು ಸಂಭ್ರಮದಿಂದ ಕೇಕೆ ಹಾಕಿದ್ದರು. <br /> <br /> ಎಲ್ಲರೂ ಕೈ ಬೀಸ ತೊಡಗಿದರು. ಜನರಿಂದ ಈ ಪರಿ ಬೆಂಬಲ ಸಿಕ್ಕುತ್ತಿ ರುವುದನ್ನು ಕಂಡ ರಶ್ಮಿ ಕೂಡ ಜನರತ್ತ ಕೈ ಬೀಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದಲ್ಲಿ ಕಂಡು ಬಂತು. ಇದರಿಂದ ಎಲ್ಲರಿಗೂ ಖುಷಿ ಆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>