ಪೇಪರ್ ಹಂಚುವ ಹುಡುಗರೂ ಮಂಗನ ಭಯದಿಂದ ಹೊರ ಬರದ ಕಾರಣ ಶನಿವಾರ ಮಧ್ಯಾಹ್ನ 12 ಗಂಟೆಯ ಮೇಲೆ ಪತ್ರಿಕೆಗಳು ಮನೆ ಮನೆಗೆ ತಲುಪಿವೆ. ಬಹಿರ್ದೆಸೆಗೆ ತೆರಳಲು ಕೂಡ ಗ್ರಾಮಸ್ಥರು ಪರದಾಡಿದರು. ಮಂಗನ ಕಾಟದಿಂದ ತಪ್ಪಿಸಿಕೊಳ್ಳಲು ಅದನ್ನು ಬಡಿಗೆಯಿಂದ ಸಾಗಿಸಲು ಮುಂದಾಗಿದ್ದರು. ಇದೇ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಮಂಗವನ್ನು ಹಿಡಿಯಲು ಯತ್ನಿಸಿತು. ಇದರಿಂದ ಭಯಗೊಂಡ ಮಂಗ ದಿಕ್ಕೆಟ್ಟು ಓಡಿ ಬೆಣ್ಣೆ ಹಳ್ಳದ ದಡದ ಗಿಡದ ಮೇಲೆ ಏರಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿತು.