<p><strong>ರೋಣ:</strong> ಕಳೆದ ವರ್ಷ ಬಿದ್ದ ಆಕಾಲಿಕ ಮಳೆಯಿಂದ ಹಾನಿಗೀಡಾದ ಈರುಳ್ಳಿ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಿದ್ದರೂ ರೈತರಿಗೆ ಇದುವರೆಗೆ ವಿತರಣೆ ಮಾಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಪ್ರಕಾಶ ಹೊಸಳ್ಳಿ ಹೇಳಿದರು.<br /> <br /> ಈರುಳ್ಳಿ ಬೆಳೆಹಾನಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಅವರ ಮೂಲಕ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ ನಂತರ ಮಾತನಾಡಿ, ಸರ್ಕಾರದಿಂದ ಪ್ರತಿ ಹೆಕ್ಟೇರ್ಗೆ ₨ 9 ಸಾವಿರ ರೂಪಾಯಿ ಪರಿಹಾರ ಧನ ಮಂಜೂರಾಗಿದೆ. ಆದರೆ ರೋಣ ತಾಲ್ಲೂಕಿನಲ್ಲಿ 22317 ರೈತರು ಈರುಳ್ಳಿ ಬೆಳೆದಿದ್ದರು. ಇವರಲ್ಲಿ ಕೆಲವರಿಗೆ ವಿತರಣೆಯಾಗಿದೆ. ಒಟ್ಟು ₨ 12 ಕೋಟಿ ಮೌಲ್ಯದ ಕೂಪನ್ ವಿತರಿಸಲಾಗಿದೆ. ಅದರಲ್ಲಿ ₨ 4 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದು ಬೇಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.<br /> <br /> ಮುಂಗಾರು ಮಳೆ ಬಿದ್ದಿದ್ದು, ಬಿತ್ತನೆಗೆ ರೈತರು ಸಿದ್ಧವಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಧನ ಮಂಜೂರು ಮಾಡಿ, ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಇದೇ 23ರ ಒಳಗಾಗಿ ಪರಿಹಾರ ಧನ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ 25ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.<br /> <br /> ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಮನವಿ ಸ್ವೀಕರಿಸಿ ಮಾತನಾಡಿದರು. ಸರ್ಕಾರದಿಂದ ಮಂಜೂರಾಗಿ ಬಂದಿದ್ದ ₨ 4.40 ಕೋಟಿಯನ್ನು ರೈತರಿಗೆ ಕೂಪನ್ ಮೂಲಕ ಬ್ಯಾಂಕ್ ಖಾತೆಗೆ ವಿತರಿಸಲಾಗಿದೆ. ಇನ್ನೂ ₨ 7 ಕೋಟಿ ಬಾಕಿ ಪಾವತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಹಣ ಬಿಡುಗಡೆಯಾದ ತಕ್ಷಣ ಪರಿಹಾರ ನೀಡಲಾಗುವುದು ಎಂದರು.<br /> <br /> ಮಲ್ಲು ಮಾದರ ಮಾತನಾಡಿದರು. ಮೌನೇಶ ಹಾದಿಮನಿ, ಮಂಜುನಾಥ ಹಾಳಕೇರಿ, ಹನುಮಂತ ಮಾದರ, ಬಿ.ಎಂ. ದಳವಾಯಿ, ಕೆ.ಎಂ. ದಳವಾಯಿ, ಹಿರಿಯಪ್ಪ ಹಲಗಿ, ಶರಣಪ್ಪ ದೊಡ್ಡಮನಿ, ಎಂ.ಆರ್. ಸಂಕನೂರ, ಶಂಕ್ರಪ್ಪ ಗುದ್ದೆಣ್ಣವರ, ಶಾಂತಪ್ಪ ಕೊಡತಗೇರಿ, ಪ್ರಶಾಂತ ಕಡಗದ, ಪರಶುರಾಮ ಮಾದರ, ನಿಂಗಪ್ಪ ಜಿಗಳೂರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ:</strong> ಕಳೆದ ವರ್ಷ ಬಿದ್ದ ಆಕಾಲಿಕ ಮಳೆಯಿಂದ ಹಾನಿಗೀಡಾದ ಈರುಳ್ಳಿ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಿದ್ದರೂ ರೈತರಿಗೆ ಇದುವರೆಗೆ ವಿತರಣೆ ಮಾಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಪ್ರಕಾಶ ಹೊಸಳ್ಳಿ ಹೇಳಿದರು.<br /> <br /> ಈರುಳ್ಳಿ ಬೆಳೆಹಾನಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಅವರ ಮೂಲಕ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ ನಂತರ ಮಾತನಾಡಿ, ಸರ್ಕಾರದಿಂದ ಪ್ರತಿ ಹೆಕ್ಟೇರ್ಗೆ ₨ 9 ಸಾವಿರ ರೂಪಾಯಿ ಪರಿಹಾರ ಧನ ಮಂಜೂರಾಗಿದೆ. ಆದರೆ ರೋಣ ತಾಲ್ಲೂಕಿನಲ್ಲಿ 22317 ರೈತರು ಈರುಳ್ಳಿ ಬೆಳೆದಿದ್ದರು. ಇವರಲ್ಲಿ ಕೆಲವರಿಗೆ ವಿತರಣೆಯಾಗಿದೆ. ಒಟ್ಟು ₨ 12 ಕೋಟಿ ಮೌಲ್ಯದ ಕೂಪನ್ ವಿತರಿಸಲಾಗಿದೆ. ಅದರಲ್ಲಿ ₨ 4 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದು ಬೇಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.<br /> <br /> ಮುಂಗಾರು ಮಳೆ ಬಿದ್ದಿದ್ದು, ಬಿತ್ತನೆಗೆ ರೈತರು ಸಿದ್ಧವಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಧನ ಮಂಜೂರು ಮಾಡಿ, ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಇದೇ 23ರ ಒಳಗಾಗಿ ಪರಿಹಾರ ಧನ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ 25ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.<br /> <br /> ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಮನವಿ ಸ್ವೀಕರಿಸಿ ಮಾತನಾಡಿದರು. ಸರ್ಕಾರದಿಂದ ಮಂಜೂರಾಗಿ ಬಂದಿದ್ದ ₨ 4.40 ಕೋಟಿಯನ್ನು ರೈತರಿಗೆ ಕೂಪನ್ ಮೂಲಕ ಬ್ಯಾಂಕ್ ಖಾತೆಗೆ ವಿತರಿಸಲಾಗಿದೆ. ಇನ್ನೂ ₨ 7 ಕೋಟಿ ಬಾಕಿ ಪಾವತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಹಣ ಬಿಡುಗಡೆಯಾದ ತಕ್ಷಣ ಪರಿಹಾರ ನೀಡಲಾಗುವುದು ಎಂದರು.<br /> <br /> ಮಲ್ಲು ಮಾದರ ಮಾತನಾಡಿದರು. ಮೌನೇಶ ಹಾದಿಮನಿ, ಮಂಜುನಾಥ ಹಾಳಕೇರಿ, ಹನುಮಂತ ಮಾದರ, ಬಿ.ಎಂ. ದಳವಾಯಿ, ಕೆ.ಎಂ. ದಳವಾಯಿ, ಹಿರಿಯಪ್ಪ ಹಲಗಿ, ಶರಣಪ್ಪ ದೊಡ್ಡಮನಿ, ಎಂ.ಆರ್. ಸಂಕನೂರ, ಶಂಕ್ರಪ್ಪ ಗುದ್ದೆಣ್ಣವರ, ಶಾಂತಪ್ಪ ಕೊಡತಗೇರಿ, ಪ್ರಶಾಂತ ಕಡಗದ, ಪರಶುರಾಮ ಮಾದರ, ನಿಂಗಪ್ಪ ಜಿಗಳೂರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>