<p><strong>ಗದಗ: </strong>ಇಪ್ಪತ್ತು ಸಾವಿರ ಕಂಠಗಳಿಂದ ಹೊರಬಂದ ಓಂ ನಿನಾದ ಇಡೀ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾರ್ದನಿಸಿತ್ತು. ಮತ್ತೆ ಒಂದೆರಡು ಕ್ಷಣ ನೀರವ ಮೌನ; ಉಸಿರಿನ ಮೆಲು ಸದ್ದು ಬಿಟ್ಟರೆ ಮತ್ತೇನು ಕೇಳುತ್ತಿಲ್ಲ. ಮತ್ತೆ ಮುಂಗಾರು ಮಳೆಯ ಅಬ್ಬರದಂತೆ ಓಂಕಾರ ನಾದ.ಇದು ಆರ್ಟ್ ಆಫ್ ಲಿವಿಂಗ್ ವತಿಯಿಂದ ನಗರದ ವಿಡಿಎಸ್ಟಿ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹಸಿರೋತ್ಸವ- ಸತ್ಸಂಗದ ದೃಶ್ಯ. ಇಲ್ಲಿ ಶ್ರೀ ರವಿಶಂಕರ ಗುರೂಜಿ, ನೆರೆದಿದ್ದ ಜನರಿಗೆ ಅಧ್ಯಾತ್ಮ ಹೇಳಿಕೊಟ್ಟರು, ಧ್ಯಾನ ಕಲಿಸಿದರು, ಎಲ್ಲರೊಡನೆ ಬೆರೆತು ತಾವು ನರ್ತಿಸಿದರು, ಹಾಡಿದರು, ಎಲ್ಲರನ್ನೂ ಮನೋರಂಜಿಸಿ ಕ್ಷಣ ಕಾಲ ಬೇರೊಂದು ಲೋಕಕ್ಕೆ ಕರೆದೊಯ್ದರು.<br /> <br /> ಇಡೀ ಸಭೆಯನ್ನು ತಮ್ಮ ಸುಪರ್ದಿಗೆ ತಗೆದುಕೊಂಡಿದ್ದ ಗುರೂಜಿ, ಸಭಿಕರನ್ನು ನಗಿಸುತ್ತಲೇ ದೇಶದ ಸಂಸ್ಕೃತಿ ಹಾಗೂ ಮೌಲ್ಯದ ಬಗ್ಗೆ ಅರಿವು ಮೂಡಿಸಿದರು. ನಾವು ಅನುಸರಿಸುತ್ತಿರುವ ಮಾರ್ಗ ಎಂತಹದು ಎಂದು ಕನ್ನಡಿಯಂತೆ ತೋರಿಸಿಕೊಟ್ಟರು. ಅಧ್ಯಾತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ಕಿವಿಮಾತನ್ನೂ ಹೇಳಿದರು.<br /> <br /> ನಟರಾಜನ ಸ್ತುತಿಯೊಂದಿಗೆ ಪ್ರಾರಂಭವಾದ ಸತ್ಸಂಗದಲ್ಲಿ ಎತ್ತ ನೋಡಿದರು ಶಿವಮಯವೇ ಆಗಿತ್ತು. ’ಓಂ ನಮಃ ಶಿವಾಯ’ ಮಂತ್ರಾಕ್ಷರ ಇಡೀ ಸಭಾಂಗಣದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತ್ತು. ಶಿವನ ಸ್ತುತಿಗಳಿಗೆ ಧ್ವನಿಗೂಡಿಸಿದ ಗುರೂಜಿ, ಭಕ್ತಿಪರವಶರಾದ ಭಕ್ತರ ಮೇಲೆ ಹೂವಿನ ದಳವನ್ನು ಪ್ರೋಕ್ಷಣೆ ಮಾಡಿದರು.<br /> <br /> ಇದಕ್ಕೂ ಮೊದಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುತ್ತಿರುವ 108 ರೈತರನ್ನು ಆರ್ಟ್ ಆಫ್ ಲಿವಿಂಗ್ ವತಿಯಿಂದ ಸನ್ಮಾನಿಸಲಾಯಿತು.ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ, ಶಿವಕುಮಾರ ಸ್ವಾಮೀಜಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಚ್.ಕೆ. ಪಾಟೀಲ ಮತ್ತಿತರರು ಸತ್ಸಂಗದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಇಪ್ಪತ್ತು ಸಾವಿರ ಕಂಠಗಳಿಂದ ಹೊರಬಂದ ಓಂ ನಿನಾದ ಇಡೀ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾರ್ದನಿಸಿತ್ತು. ಮತ್ತೆ ಒಂದೆರಡು ಕ್ಷಣ ನೀರವ ಮೌನ; ಉಸಿರಿನ ಮೆಲು ಸದ್ದು ಬಿಟ್ಟರೆ ಮತ್ತೇನು ಕೇಳುತ್ತಿಲ್ಲ. ಮತ್ತೆ ಮುಂಗಾರು ಮಳೆಯ ಅಬ್ಬರದಂತೆ ಓಂಕಾರ ನಾದ.ಇದು ಆರ್ಟ್ ಆಫ್ ಲಿವಿಂಗ್ ವತಿಯಿಂದ ನಗರದ ವಿಡಿಎಸ್ಟಿ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹಸಿರೋತ್ಸವ- ಸತ್ಸಂಗದ ದೃಶ್ಯ. ಇಲ್ಲಿ ಶ್ರೀ ರವಿಶಂಕರ ಗುರೂಜಿ, ನೆರೆದಿದ್ದ ಜನರಿಗೆ ಅಧ್ಯಾತ್ಮ ಹೇಳಿಕೊಟ್ಟರು, ಧ್ಯಾನ ಕಲಿಸಿದರು, ಎಲ್ಲರೊಡನೆ ಬೆರೆತು ತಾವು ನರ್ತಿಸಿದರು, ಹಾಡಿದರು, ಎಲ್ಲರನ್ನೂ ಮನೋರಂಜಿಸಿ ಕ್ಷಣ ಕಾಲ ಬೇರೊಂದು ಲೋಕಕ್ಕೆ ಕರೆದೊಯ್ದರು.<br /> <br /> ಇಡೀ ಸಭೆಯನ್ನು ತಮ್ಮ ಸುಪರ್ದಿಗೆ ತಗೆದುಕೊಂಡಿದ್ದ ಗುರೂಜಿ, ಸಭಿಕರನ್ನು ನಗಿಸುತ್ತಲೇ ದೇಶದ ಸಂಸ್ಕೃತಿ ಹಾಗೂ ಮೌಲ್ಯದ ಬಗ್ಗೆ ಅರಿವು ಮೂಡಿಸಿದರು. ನಾವು ಅನುಸರಿಸುತ್ತಿರುವ ಮಾರ್ಗ ಎಂತಹದು ಎಂದು ಕನ್ನಡಿಯಂತೆ ತೋರಿಸಿಕೊಟ್ಟರು. ಅಧ್ಯಾತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ಕಿವಿಮಾತನ್ನೂ ಹೇಳಿದರು.<br /> <br /> ನಟರಾಜನ ಸ್ತುತಿಯೊಂದಿಗೆ ಪ್ರಾರಂಭವಾದ ಸತ್ಸಂಗದಲ್ಲಿ ಎತ್ತ ನೋಡಿದರು ಶಿವಮಯವೇ ಆಗಿತ್ತು. ’ಓಂ ನಮಃ ಶಿವಾಯ’ ಮಂತ್ರಾಕ್ಷರ ಇಡೀ ಸಭಾಂಗಣದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತ್ತು. ಶಿವನ ಸ್ತುತಿಗಳಿಗೆ ಧ್ವನಿಗೂಡಿಸಿದ ಗುರೂಜಿ, ಭಕ್ತಿಪರವಶರಾದ ಭಕ್ತರ ಮೇಲೆ ಹೂವಿನ ದಳವನ್ನು ಪ್ರೋಕ್ಷಣೆ ಮಾಡಿದರು.<br /> <br /> ಇದಕ್ಕೂ ಮೊದಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುತ್ತಿರುವ 108 ರೈತರನ್ನು ಆರ್ಟ್ ಆಫ್ ಲಿವಿಂಗ್ ವತಿಯಿಂದ ಸನ್ಮಾನಿಸಲಾಯಿತು.ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ, ಶಿವಕುಮಾರ ಸ್ವಾಮೀಜಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಚ್.ಕೆ. ಪಾಟೀಲ ಮತ್ತಿತರರು ಸತ್ಸಂಗದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>