<p>ಗಜೇಂದ್ರಗಡ: ವಿಶ್ವ ಯುವ ಸಮೂಹವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿ, ಯುವಶಕ್ತಿ ಏನೇಂಬುದನ್ನು ತೋರಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದು ಕೆ.ಎಸ್.ಎಸ್ ಸಂಸ್ಧೆಯ ಸ್ಧಳೀಯ ಅಧ್ಯಕ್ಷ ಬಿ.ಎಫ್ಅವಾರಿ ಉದ್ಘಾಟಿಸಿ ಮಾತನಾಡಿದರು. <br /> <br /> ಪ್ರಸ್ತುತ ರಾಷ್ಟ್ರದ ಯುವ ಶಕ್ತಿಗೆ ವಿವೇಕಾನಂದರ ಜೀವನ ಶೈಲಿ ಹಾಗೂ ತತ್ವಾದರ್ಶಗಳು ಮಾದರಿಯಾಗಿವೆ. ಈ ನಿಟ್ಟಿನಲ್ಲಿ ಯುವಕರು ಅವುಗಳನ್ನು ರೂಢಿ ಸಿಕೊಂಡು ಆದರ್ಶಯುತ ಬದುಕು ರೂಪಿಸಿ ಕೊಳ್ಳಬೇಕಿದೆ ಎಂದರು.<br /> <br /> ರಾಷ್ಟ್ರದ ಯುವಕರು ಸಾಧನೆ ಮಾಡುವ ತವಕದಲ್ಲಿದ್ದಾರೆ. ಆದರೆ, ಗುರಿ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ಭವಿಷ್ಯತ್ತಿನ ಕನಸು ಸಾಕಾರಗೊಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.<br /> <br /> ಯುವಕರು ದುರ್ಬಲರೆಂದು ಭಾವಿಸಬಾರದು. ಅದೇ ದೊಡ್ಡ ಮಹಾಪರಾಧ. ಸಾಧಿಸುವ ಇಚ್ಛಾಶಕ್ತಿ ಹೊಂದಿದ್ದರೆ ಆರ್ಧ ಗುರಿ ತಲುಪಿದಂತೆ. ನಮ್ಮ ಕಣ್ಣುಗಳೆರಡು ನಾವಂದುಕೊಂಡ ಗುರಿ ನೋಡುತ್ತಿರಬೇಕು. ಅಕ್ಕ-ಪಕ್ಕಕ್ಕೂ ಕಣ್ಣಾಡಿಸಬಾರದು ಎಂದ ವಿವೇಕಾನಂದರ ಸಂದೇಶವನ್ನು ನೆನಪಿನಲ್ಲಿಟ್ಟುಕೊಂಡು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.<br /> <br /> ಯುವಕರಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಸ್ವಾಮಿ ವಿವೇಕಾನಂದರು ಪ್ರೇರಕ ಶಕ್ತಿಯಾಗಿದ್ದರು. ಜಾತಿ ನಿರ್ಮೂಲನೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಜಾತಿಭೇದಗಳಿಲ್ಲದೆ ನಾವೆಲ್ಲರೂ ಭಾರತೀಯರೆಂಬ ದೃಷ್ಟಿಕೋನದಲ್ಲಿ ಜೀವಿಸುವುದು ಎಲ್ಲರಿಗೂ ಒಳಿತು. ಭಾರತದಲ್ಲಿ ವಿವಿಧ ಜಾತಿ ಧರ್ಮ, ಆಚಾರ-ವಿಚಾರ ಸಾಂಪ್ರದಾಯಗಳು ಆಚರಣೆಯಲ್ಲಿವೆ. ಜಾತಿ ವಿಚಾರ ಕೆದಕಿ ಶಾಂತಿ ಕದಡುವುದು ಸರಿಯಲ್ಲ ಎಂಬ ವಿವೇಕಾನಂದರ ತತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು. <br /> <br /> ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಿ.ಎಸ್.ಗಾಳಿ ಮಾತನಾಡಿ, ಪ್ರಸ್ತುತ ರಾಷ್ಟ್ರದಲ್ಲಿನ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿ ಆವರಿಸಿದೆ. ಈ ಅನಿಷ್ಠವನ್ನು ಬುಡಸ ಮೇತ ಕೀಳದಿದ್ದಲ್ಲಿ ಭವ್ಯ ಭಾರತ ಅವಸಾನದತ್ತ ತಲುಪುತ್ತದೆ. ಇಂತಹ ಸಂದರ್ಭದಲ್ಲಿ ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಮೈಗೂಡಿಸಿಕೊಂಡು ದೇಶದ ರಕ್ಷಣೆಗೆ ಸಿದ್ದರಾಗಬೇಕು ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ, ಬಡತನ, ಜಾತೀಯತೆ ಸಮಸ್ಯೆಗಳನ್ನು ತೊಳೆದು ಹಾಕಲು ಹೋರಾಡಬೇಕಿದೆ ಎಂದರು. <br /> <br /> ಪ್ರಾಚಾರ್ಯ ಎಚ್.ಎನ್.ಗೌಡರ, ಎನ್.ಎಚ್.ಜೂಚನಿ, ಎಂ.ಕೆ.ಬೆವಿನಕಟ್ಟಿ, ಜಿ.ಜಿ.ಕುಲಕರ್ಣಿ, ಎ.ಎಂ. ಜಾಲಿಹಾಳ, ತುಳಸಾ ಅರಮನಿ, ರೇಣುಕಾ ತಿರಕೋಜಿ ಉಪಸ್ಧಿತರಿದ್ದರು.<br /> <br /> ಯು.ಎಸ್.ಮಲ್ಲಾಪೂರ ಸ್ವಾಗತಿಸಿದರು. ರವೀಂದ್ರ ಪತ್ತಾರ ನಿರೂಪಿಸಿದರು. ಎಸ್.ಎಸ್.ಲೆಕ್ಕಿಹಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಜೇಂದ್ರಗಡ: ವಿಶ್ವ ಯುವ ಸಮೂಹವನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿ, ಯುವಶಕ್ತಿ ಏನೇಂಬುದನ್ನು ತೋರಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದು ಕೆ.ಎಸ್.ಎಸ್ ಸಂಸ್ಧೆಯ ಸ್ಧಳೀಯ ಅಧ್ಯಕ್ಷ ಬಿ.ಎಫ್ಅವಾರಿ ಉದ್ಘಾಟಿಸಿ ಮಾತನಾಡಿದರು. <br /> <br /> ಪ್ರಸ್ತುತ ರಾಷ್ಟ್ರದ ಯುವ ಶಕ್ತಿಗೆ ವಿವೇಕಾನಂದರ ಜೀವನ ಶೈಲಿ ಹಾಗೂ ತತ್ವಾದರ್ಶಗಳು ಮಾದರಿಯಾಗಿವೆ. ಈ ನಿಟ್ಟಿನಲ್ಲಿ ಯುವಕರು ಅವುಗಳನ್ನು ರೂಢಿ ಸಿಕೊಂಡು ಆದರ್ಶಯುತ ಬದುಕು ರೂಪಿಸಿ ಕೊಳ್ಳಬೇಕಿದೆ ಎಂದರು.<br /> <br /> ರಾಷ್ಟ್ರದ ಯುವಕರು ಸಾಧನೆ ಮಾಡುವ ತವಕದಲ್ಲಿದ್ದಾರೆ. ಆದರೆ, ಗುರಿ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ಭವಿಷ್ಯತ್ತಿನ ಕನಸು ಸಾಕಾರಗೊಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.<br /> <br /> ಯುವಕರು ದುರ್ಬಲರೆಂದು ಭಾವಿಸಬಾರದು. ಅದೇ ದೊಡ್ಡ ಮಹಾಪರಾಧ. ಸಾಧಿಸುವ ಇಚ್ಛಾಶಕ್ತಿ ಹೊಂದಿದ್ದರೆ ಆರ್ಧ ಗುರಿ ತಲುಪಿದಂತೆ. ನಮ್ಮ ಕಣ್ಣುಗಳೆರಡು ನಾವಂದುಕೊಂಡ ಗುರಿ ನೋಡುತ್ತಿರಬೇಕು. ಅಕ್ಕ-ಪಕ್ಕಕ್ಕೂ ಕಣ್ಣಾಡಿಸಬಾರದು ಎಂದ ವಿವೇಕಾನಂದರ ಸಂದೇಶವನ್ನು ನೆನಪಿನಲ್ಲಿಟ್ಟುಕೊಂಡು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.<br /> <br /> ಯುವಕರಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಸ್ವಾಮಿ ವಿವೇಕಾನಂದರು ಪ್ರೇರಕ ಶಕ್ತಿಯಾಗಿದ್ದರು. ಜಾತಿ ನಿರ್ಮೂಲನೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಜಾತಿಭೇದಗಳಿಲ್ಲದೆ ನಾವೆಲ್ಲರೂ ಭಾರತೀಯರೆಂಬ ದೃಷ್ಟಿಕೋನದಲ್ಲಿ ಜೀವಿಸುವುದು ಎಲ್ಲರಿಗೂ ಒಳಿತು. ಭಾರತದಲ್ಲಿ ವಿವಿಧ ಜಾತಿ ಧರ್ಮ, ಆಚಾರ-ವಿಚಾರ ಸಾಂಪ್ರದಾಯಗಳು ಆಚರಣೆಯಲ್ಲಿವೆ. ಜಾತಿ ವಿಚಾರ ಕೆದಕಿ ಶಾಂತಿ ಕದಡುವುದು ಸರಿಯಲ್ಲ ಎಂಬ ವಿವೇಕಾನಂದರ ತತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು. <br /> <br /> ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಿ.ಎಸ್.ಗಾಳಿ ಮಾತನಾಡಿ, ಪ್ರಸ್ತುತ ರಾಷ್ಟ್ರದಲ್ಲಿನ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿ ಆವರಿಸಿದೆ. ಈ ಅನಿಷ್ಠವನ್ನು ಬುಡಸ ಮೇತ ಕೀಳದಿದ್ದಲ್ಲಿ ಭವ್ಯ ಭಾರತ ಅವಸಾನದತ್ತ ತಲುಪುತ್ತದೆ. ಇಂತಹ ಸಂದರ್ಭದಲ್ಲಿ ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಮೈಗೂಡಿಸಿಕೊಂಡು ದೇಶದ ರಕ್ಷಣೆಗೆ ಸಿದ್ದರಾಗಬೇಕು ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ, ಬಡತನ, ಜಾತೀಯತೆ ಸಮಸ್ಯೆಗಳನ್ನು ತೊಳೆದು ಹಾಕಲು ಹೋರಾಡಬೇಕಿದೆ ಎಂದರು. <br /> <br /> ಪ್ರಾಚಾರ್ಯ ಎಚ್.ಎನ್.ಗೌಡರ, ಎನ್.ಎಚ್.ಜೂಚನಿ, ಎಂ.ಕೆ.ಬೆವಿನಕಟ್ಟಿ, ಜಿ.ಜಿ.ಕುಲಕರ್ಣಿ, ಎ.ಎಂ. ಜಾಲಿಹಾಳ, ತುಳಸಾ ಅರಮನಿ, ರೇಣುಕಾ ತಿರಕೋಜಿ ಉಪಸ್ಧಿತರಿದ್ದರು.<br /> <br /> ಯು.ಎಸ್.ಮಲ್ಲಾಪೂರ ಸ್ವಾಗತಿಸಿದರು. ರವೀಂದ್ರ ಪತ್ತಾರ ನಿರೂಪಿಸಿದರು. ಎಸ್.ಎಸ್.ಲೆಕ್ಕಿಹಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>