ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಅರ್ಜಿ ವಿಲೇವಾರಿ

ಸಕಾಲ ಸಪ್ತಾಹ: ವಿವಿಧ ಕಾರಣಕ್ಕೆ 362 ಅರ್ಜಿ ತಿರಸ್ಕೃತ
Last Updated 7 ಡಿಸೆಂಬರ್ 2020, 14:40 IST
ಅಕ್ಷರ ಗಾತ್ರ

ಹಾಸನ: ಕಂದಾಯ ಇಲಾಖೆ, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಕೋಶ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನ.30ರಿಂದ ಡಿ.5 ರವರೆಗೆ ನಡೆದ ಸಕಾಲ ಸಪ್ತಾಹದಲ್ಲಿ ಒಟ್ಟು 9,426 ಅರ್ಜಿಗಳು ಸ್ವೀಕೃತವಾಗಿದ್ದು, ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿಗಳು ಸೇರಿ ಒಟ್ಟು 10,655 ಅರ್ಜಿ ವಿಲೇವಾರಿ ಮಾಡಲಾಗಿದೆ.

ವಿವಿಧ ಕಾರಣಗಳಿಂದ 362 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 416 ಅರ್ಜಿಗಳ ವಿಲೇವಾರಿ ವಿಳಂಬವಾಗಿ ಮಾಡಲಾಗಿದೆ.

ಸಪ್ತಾಹ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ 5,495 ಅರ್ಜಿ ಸ್ವೀಕರಿಸಿದ್ದು, ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿ ಸೇರಿದಂತೆ 6,291 ಅರ್ಜಿ ವಿಲೇವಾರಿ ಮಾಡಲಾಗಿದೆ. 270 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 320 ಅರ್ಜಿಗಳನ್ನು ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ಸಾರಿಗೆ ಇಲಾಖೆಯಲ್ಲಿ ಒಟ್ಟು 2,044 ಅರ್ಜಿ ಸ್ವೀಕರಿಸಲಾಗಿದೆ. 2,551 ಅರ್ಜಿಗಳನ್ನು ವಿಲೇವಾರಿ ಮಾಡಿದೆ.
ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿ ಸೇರಿ 50 ಅರ್ಜಿ ತಿರಸ್ಕರಿಸಲಾಗಿದ್ದು, 46 ಅರ್ಜಿಗಳನ್ನು ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ನಗರಾಭಿವೃದ್ಧಿ ಕೋಶ ಇಲಾಖೆಯಲ್ಲಿ 582 ಅರ್ಜಿಗಳನ್ನು ಸ್ವೀಕರಿಸಿದ್ದು, 528 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2 ಅರ್ಜಿಗಳನ್ನು ತಿರಸ್ಕರಿಲಾಗಿದ್ದು, 27 ಅರ್ಜಿ ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 1.305 ಅರ್ಜಿ ಸ್ವೀಕರಿಸಿದ್ದು, 1,285 ಅರ್ಜಿ ವಿಲೇವಾರಿ ಮಾಡಲಾಗಿದೆ. 40 ಅರ್ಜಿ ತಿರಸ್ಕರಿಸಲಾಗಿದ್ದು, 23 ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಲೇವಾರಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT