<p>ಹಾಸನ: ಕೋವಿಡ್ ಎರಡನೇ ಅಲೆ ಆರ್ಭಟದ ನಡುವೆಯೂ ಗುಣಮುಖರಾಗುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬುಧವಾರ ಒಂದೇ ದಿನ 1455 ಮಂದಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಒಟ್ಟಾರೆ 28370 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಹೊಸದಾಗಿ 1528 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 57539ಕ್ಕೆ ಏರಿಕೆಯಾಗಿದೆ. 125 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಚಿಕಿತ್ಸೆಗೆ ಸ್ಪಂದಿಸದೆ 19 ಮಂದಿ ಅಸುನೀಗಿದ್ದಾರೆ. ಹಾಸನದ 8, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕಿನ ತಲಾ ಮೂವರು, ಅರಕಲಗೂಡು, ಅರಸೀಕೆರೆಯ ತಲಾ ಇಬ್ಬರು ಹಾಗೂ ಬೇಲೂರಿನ ಒಬ್ಬರು ಮೃತಪಟ್ಟಿದ್ದಾರೆ. ಕಾಯಿಲೆಗೆ ಈವರೆಗೆ ಮೃತಪಟ್ಟವರ ಸಂಖ್ಯೆ 739ಕ್ಕೆ ಏರಿಕೆಯಾಗಿದೆ.</p>.<p>ಹೊಸದಾಗಿ ಆಲೂರು ತಾಲ್ಲೂಕಿನ 60, ಅರಕಲಗೂಡು 137, ಅರಸೀಕೆರೆ 171, ಬೇಲೂರು 206, ಚನ್ನರಾಯಪಟ್ಟಣ 218, ಹಾಸನ 582, ಹೊಳೆನರಸೀಪುರ 64, ಸಕಲೇಶಪುರ 87, ಇತರೆ ಜಿಲ್ಲೆಯ ಮೂವರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಕೋವಿಡ್ ಎರಡನೇ ಅಲೆ ಆರ್ಭಟದ ನಡುವೆಯೂ ಗುಣಮುಖರಾಗುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬುಧವಾರ ಒಂದೇ ದಿನ 1455 ಮಂದಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಒಟ್ಟಾರೆ 28370 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಹೊಸದಾಗಿ 1528 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 57539ಕ್ಕೆ ಏರಿಕೆಯಾಗಿದೆ. 125 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಚಿಕಿತ್ಸೆಗೆ ಸ್ಪಂದಿಸದೆ 19 ಮಂದಿ ಅಸುನೀಗಿದ್ದಾರೆ. ಹಾಸನದ 8, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕಿನ ತಲಾ ಮೂವರು, ಅರಕಲಗೂಡು, ಅರಸೀಕೆರೆಯ ತಲಾ ಇಬ್ಬರು ಹಾಗೂ ಬೇಲೂರಿನ ಒಬ್ಬರು ಮೃತಪಟ್ಟಿದ್ದಾರೆ. ಕಾಯಿಲೆಗೆ ಈವರೆಗೆ ಮೃತಪಟ್ಟವರ ಸಂಖ್ಯೆ 739ಕ್ಕೆ ಏರಿಕೆಯಾಗಿದೆ.</p>.<p>ಹೊಸದಾಗಿ ಆಲೂರು ತಾಲ್ಲೂಕಿನ 60, ಅರಕಲಗೂಡು 137, ಅರಸೀಕೆರೆ 171, ಬೇಲೂರು 206, ಚನ್ನರಾಯಪಟ್ಟಣ 218, ಹಾಸನ 582, ಹೊಳೆನರಸೀಪುರ 64, ಸಕಲೇಶಪುರ 87, ಇತರೆ ಜಿಲ್ಲೆಯ ಮೂವರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>