‘ಬೀದಿ ನಾಯಿಗಳ ಹಾವಳಿ ನಗರ ವಾಸಿಗಳಿಗಷ್ಟೇ ಅಲ್ಲದೆ ನಗರಸಭೆಗೂ ತಲೆ ನೋವಾಗಿದೆ. ಬೀದಿ ನಾಯಿಗಳನ್ನು ಸಾಯಿಸುವಂತೆಯೂ ಇಲ್ಲ, ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಲು ಒಂದು ನಾಯಿಗೆ ಕನಿಷ್ಠ ₹ 1,500 ಬೇಕು. ನಗರಸಭೆಯಲ್ಲಿ ಅನುದಾನದ ಕೊರತೆ ಇದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಕಾಂತರಾಜ್ ಭರವಸೆ ನೀಡಿದರು.