<p><strong>ಹಾಸನ:</strong> ನಾಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡಿರುವ ಜಿಲ್ಲೆಯ ರೈತರು ₹ 94 ಕೋಟಿ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ.</p>.<p>ಪ್ರತಿ ಕ್ವಿಂಟಲ್ಗೆ ರಾಜ್ಯ ಸರ್ಕಾರದ ₹1,500 ಪ್ರೋತ್ಸಾಹ ಧನ ಹಾಗೂ ಕೇಂದ್ರ ಸರ್ಕಾರದ ₹12ಸಾವಿರ ಬೆಂಬಲ ಬೆಲೆ ಸೇರಿ ಒಟ್ಟು ₹13,500 ಬೆಲೆ ನಿಗದಿಯಾಗಿತ್ತು. ಪ್ರತಿಯೊಬ್ಬರಿಂದ ಎಕರೆಗೆ ಆರು ಕ್ವಿಂಟಲ್ನಂತೆ ಗರಿಷ್ಠ 15 ಕ್ವಿಂಟಲ್ವರೆಗೂ ಉಂಡೆ ಕೊಬ್ಬರಿ ಖರೀದಿಸಲಾಗಿತ್ತು. ಮಾರ್ಚ್ 4 ರಿಂದ ಖರೀದಿ ಪ್ರಕ್ರಿಯೆ ನಡೆದಿತ್ತು. </p>.<p>ಈಗ ಹಲವು ತಿಂಗಳಾದರೂ ಎಲ್ಲ ರೈತರಿಗೆ ಹಣ ಪಾವತಿಯಾಗಿಲ್ಲ. ನೆರೆಯ ತುಮಕೂರು ಜಿಲ್ಲೆಯ ಒಂದೆರಡು ಖರೀದಿ ಕೇಂದ್ರದಲ್ಲಿ ಮಾತ್ರ ಕೆಲ ರೈತರಿಗೆ ಪಾವತಿಸಲಾಗಿತ್ತು. ಬಾಕಿ ಪಾವತಿಗಾಗಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ ನಂತರ ಕೆಲವರಿಗೆ ಹಣ ಪಾವತಿಸಲಾಗಿತ್ತು.</p>.<p>‘ಜಿಲ್ಲೆಯ ರೈತರಿಂದ ಖರೀದಿಸಿದ ಕೊಬ್ಬರಿಗೆ ಪಾವತಿಸಬೇಕಿದ್ದ ಒಟ್ಟು ₹291.83 ಕೋಟಿ ಪೈಕಿ ₹197.40 ಕೋಟಿ ಪಾವತಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆಯೇ ಉಳಿದ ₹ 94.42 ಕೋಟಿಯನ್ನು ಪಾವತಿಸಲಾಗುವುದು’ ಎಂದು ನಾಫೆಡ್ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.</p>.<p>‘ಈಗಾಗಲೇ ಧಾರಾಕಾರ ಮಳೆ ಸುರಿದು, ಬೆಳೆಗಳೆಲ್ಲವೂ ಹಾಳಾಗಿವೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಬಾಕಿ ಉಳಿದಿರುವ ಕೊಬ್ಬರಿ ಹಣವನ್ನಾದರೂ ಪಾವತಿ ಮಾಡಿದರೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಹೊಳೆನರಸೀಪುರದ ರೈತ ದರ್ಶನ್.</p>.<div><blockquote>ನಾಫೆಡ್ ಮೂಲಕ ಖರೀದಿ ಪ್ರಾರಂಭ ಮಾಡಿರುವುದರಿಂದ ನಮಗೆ ಉತ್ತಮ ದರ ದೊರಕುತ್ತಿದೆ. ವರ್ಷ ಪೂರ್ತಿ ಕೊಬ್ಬರಿ ಖರೀದಿಗೆ ಕ್ರಮ ಕೈಗೊಂಡರೆ ಅನುಕೂಲ.</blockquote><span class="attribution">- ಸಿ.ಎ. ನಟರಾಜ್ ಚನ್ನರಾಯಪಟ್ಟಣದ ತೆಂಗು ಬೆಳೆಗಾರ</span></div>.<div><blockquote>ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಿದ್ದರೂ ಹಣ ಪಾವತಿ ವಿಳಂಬವಾಗುತ್ತಿದೆ. ಹಲವು ರೈತರು ತೊಂದರೆ ಅನುಭವಿಸುವಂತಾಗಿದೆ.</blockquote><span class="attribution">- ಸಂತೋಷ್ ದಿಂಡಗೂರು ತೆಂಗು ಬೆಳೆಗಾರ</span></div>.<div><blockquote>ಕೊಬ್ಬರಿಯ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ 5718 ರೈತರಿಗೆ ಅನುಕೂಲ ಆಗಲಿದೆ.</blockquote><span class="attribution">- ಶ್ರೇಯಸ್ ಪಟೇಲ್ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ನಾಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡಿರುವ ಜಿಲ್ಲೆಯ ರೈತರು ₹ 94 ಕೋಟಿ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ.</p>.<p>ಪ್ರತಿ ಕ್ವಿಂಟಲ್ಗೆ ರಾಜ್ಯ ಸರ್ಕಾರದ ₹1,500 ಪ್ರೋತ್ಸಾಹ ಧನ ಹಾಗೂ ಕೇಂದ್ರ ಸರ್ಕಾರದ ₹12ಸಾವಿರ ಬೆಂಬಲ ಬೆಲೆ ಸೇರಿ ಒಟ್ಟು ₹13,500 ಬೆಲೆ ನಿಗದಿಯಾಗಿತ್ತು. ಪ್ರತಿಯೊಬ್ಬರಿಂದ ಎಕರೆಗೆ ಆರು ಕ್ವಿಂಟಲ್ನಂತೆ ಗರಿಷ್ಠ 15 ಕ್ವಿಂಟಲ್ವರೆಗೂ ಉಂಡೆ ಕೊಬ್ಬರಿ ಖರೀದಿಸಲಾಗಿತ್ತು. ಮಾರ್ಚ್ 4 ರಿಂದ ಖರೀದಿ ಪ್ರಕ್ರಿಯೆ ನಡೆದಿತ್ತು. </p>.<p>ಈಗ ಹಲವು ತಿಂಗಳಾದರೂ ಎಲ್ಲ ರೈತರಿಗೆ ಹಣ ಪಾವತಿಯಾಗಿಲ್ಲ. ನೆರೆಯ ತುಮಕೂರು ಜಿಲ್ಲೆಯ ಒಂದೆರಡು ಖರೀದಿ ಕೇಂದ್ರದಲ್ಲಿ ಮಾತ್ರ ಕೆಲ ರೈತರಿಗೆ ಪಾವತಿಸಲಾಗಿತ್ತು. ಬಾಕಿ ಪಾವತಿಗಾಗಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ ನಂತರ ಕೆಲವರಿಗೆ ಹಣ ಪಾವತಿಸಲಾಗಿತ್ತು.</p>.<p>‘ಜಿಲ್ಲೆಯ ರೈತರಿಂದ ಖರೀದಿಸಿದ ಕೊಬ್ಬರಿಗೆ ಪಾವತಿಸಬೇಕಿದ್ದ ಒಟ್ಟು ₹291.83 ಕೋಟಿ ಪೈಕಿ ₹197.40 ಕೋಟಿ ಪಾವತಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆಯೇ ಉಳಿದ ₹ 94.42 ಕೋಟಿಯನ್ನು ಪಾವತಿಸಲಾಗುವುದು’ ಎಂದು ನಾಫೆಡ್ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.</p>.<p>‘ಈಗಾಗಲೇ ಧಾರಾಕಾರ ಮಳೆ ಸುರಿದು, ಬೆಳೆಗಳೆಲ್ಲವೂ ಹಾಳಾಗಿವೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಬಾಕಿ ಉಳಿದಿರುವ ಕೊಬ್ಬರಿ ಹಣವನ್ನಾದರೂ ಪಾವತಿ ಮಾಡಿದರೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಹೊಳೆನರಸೀಪುರದ ರೈತ ದರ್ಶನ್.</p>.<div><blockquote>ನಾಫೆಡ್ ಮೂಲಕ ಖರೀದಿ ಪ್ರಾರಂಭ ಮಾಡಿರುವುದರಿಂದ ನಮಗೆ ಉತ್ತಮ ದರ ದೊರಕುತ್ತಿದೆ. ವರ್ಷ ಪೂರ್ತಿ ಕೊಬ್ಬರಿ ಖರೀದಿಗೆ ಕ್ರಮ ಕೈಗೊಂಡರೆ ಅನುಕೂಲ.</blockquote><span class="attribution">- ಸಿ.ಎ. ನಟರಾಜ್ ಚನ್ನರಾಯಪಟ್ಟಣದ ತೆಂಗು ಬೆಳೆಗಾರ</span></div>.<div><blockquote>ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಿದ್ದರೂ ಹಣ ಪಾವತಿ ವಿಳಂಬವಾಗುತ್ತಿದೆ. ಹಲವು ರೈತರು ತೊಂದರೆ ಅನುಭವಿಸುವಂತಾಗಿದೆ.</blockquote><span class="attribution">- ಸಂತೋಷ್ ದಿಂಡಗೂರು ತೆಂಗು ಬೆಳೆಗಾರ</span></div>.<div><blockquote>ಕೊಬ್ಬರಿಯ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ 5718 ರೈತರಿಗೆ ಅನುಕೂಲ ಆಗಲಿದೆ.</blockquote><span class="attribution">- ಶ್ರೇಯಸ್ ಪಟೇಲ್ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>