<p><strong>ಹೊಳೆನರಸೀಪುರ:</strong> ‘ಶಾಲೆ, ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆಯಿಂದ ಮಾಡಿಸದೆ ಗೃಹಮಂಡಳಿಯಿಂದ ಮಾಡಿಸಿ ಸರ್ಕಾರ ಮತ್ತು ಅಧಿಕಾರಿಗಳು ಶೇ 30ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಶಾಸಕ ರೇವಣ್ಣ ಆರೋಪಿಸಿದರು.</p>.<p>ಸೋಮವಾರ ಪಟ್ಟಣದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ₹1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 5 ಪ್ರಯೋಗಾಲಯ ಕಟ್ಟಡ ಹಾಗೂ ಚಟ್ಟನಹಳ್ಳಿ ಹೌಸಿಂಗ್ ಬೋರ್ಡ್ನಲ್ಲಿ ₹8.60 ಕೋಟಿ ವೆಚ್ಚದಲ್ಲಿ 52 ಕೊಠಡಿಗಳ 5 ಅಂತಸ್ತಿನ ಮೊರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ ಮಾತನಾಡಿದರು.</p>.<p>‘ಪಿಡ್ಬ್ಲ್ಯುಡಿ ಇಲಾಖೆಯಿಂದ ಕೆಲಸ ಮಾಡಿಸಿದ್ದರೆ ಸರ್ಕಾರಕ್ಕೆ ಹಣ ಉಳಿಯುತ್ತಿತ್ತು ಆದರೆ, 30 ಪರ್ಸೆಂಟ್ ಕಮಿಷನ್ ಸಿಗುತ್ತಿರಲಿಲ್ಲ. ಕಮಿಷನ್ ಆಸೆಗಾಗಿ ಗೃಹಮಂಡಳಿಗೆ ಶಾಲಾ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡಿದೆ’ ಎಂದು ದೂರಿದರು.</p>.<p>‘ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಕಾಲೇಜು ಅಭಿವೃದ್ದಿ ನಿಧಿ (ಐ.ಡಿ.ಎಫ್) ಹಣವನ್ನು ಆಯಾಯ ಕಾಲೇಜುಗಳ ಅಭಿವೃದ್ಧಿಗೆ ಬಳಸಲು ಅವಕಾಶ ಇತ್ತು. ಆದರೆ ಈ ಸರ್ಕಾರ ಎಲ್ಲಾ ಕಾಲೇಜುಗಳ ಹಣವನ್ನು ಕ್ರೋಢಿಕರಿಸಿ ಕಾಲೇಜುಗಳಿಗೆ ಅಗತ್ಯ ಅಲಕರಣೆಗಳನ್ನು ನೀಡಲಾಗುತ್ತದೆ ಎನ್ನುವ ಆದೇಶ ಹೊರಡಿಸಿತ್ತು. 2 ವರ್ಷಗಳಾದರೂ ಯಾವುದೇ ಉಪಕರಣ ನೀಡಲಿಲ್ಲ. ಇದರಲ್ಲೂ ಕಮಿಷನ್ ಪಡೆಯುವ ಉದ್ದೇಶವಿದೆ’ ಎಂದು ಆರೋಪಿಸಿದರು.</p>.<p>‘ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದು ಆಯಾಯ ಕಾಲೇಜುಗಳ ಐಡಿಎಫ್ ನಿಧಿಯನ್ನು ಈ ಹಿಂದಿನ ನಿಯಮದಂತೆ ಆಯಾಯಾ ಕಾಲೆಜುಗಳಿಗೇ ಬಳಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಪ್ರಾಂಶುಪಾಲ ಶ್ರೀಧರ್, ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಮಂಜುಳಾ, ಎಇಇ ಪ್ರಮೋದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ‘ಶಾಲೆ, ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆಯಿಂದ ಮಾಡಿಸದೆ ಗೃಹಮಂಡಳಿಯಿಂದ ಮಾಡಿಸಿ ಸರ್ಕಾರ ಮತ್ತು ಅಧಿಕಾರಿಗಳು ಶೇ 30ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಶಾಸಕ ರೇವಣ್ಣ ಆರೋಪಿಸಿದರು.</p>.<p>ಸೋಮವಾರ ಪಟ್ಟಣದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ₹1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 5 ಪ್ರಯೋಗಾಲಯ ಕಟ್ಟಡ ಹಾಗೂ ಚಟ್ಟನಹಳ್ಳಿ ಹೌಸಿಂಗ್ ಬೋರ್ಡ್ನಲ್ಲಿ ₹8.60 ಕೋಟಿ ವೆಚ್ಚದಲ್ಲಿ 52 ಕೊಠಡಿಗಳ 5 ಅಂತಸ್ತಿನ ಮೊರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ ಮಾತನಾಡಿದರು.</p>.<p>‘ಪಿಡ್ಬ್ಲ್ಯುಡಿ ಇಲಾಖೆಯಿಂದ ಕೆಲಸ ಮಾಡಿಸಿದ್ದರೆ ಸರ್ಕಾರಕ್ಕೆ ಹಣ ಉಳಿಯುತ್ತಿತ್ತು ಆದರೆ, 30 ಪರ್ಸೆಂಟ್ ಕಮಿಷನ್ ಸಿಗುತ್ತಿರಲಿಲ್ಲ. ಕಮಿಷನ್ ಆಸೆಗಾಗಿ ಗೃಹಮಂಡಳಿಗೆ ಶಾಲಾ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡಿದೆ’ ಎಂದು ದೂರಿದರು.</p>.<p>‘ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಕಾಲೇಜು ಅಭಿವೃದ್ದಿ ನಿಧಿ (ಐ.ಡಿ.ಎಫ್) ಹಣವನ್ನು ಆಯಾಯ ಕಾಲೇಜುಗಳ ಅಭಿವೃದ್ಧಿಗೆ ಬಳಸಲು ಅವಕಾಶ ಇತ್ತು. ಆದರೆ ಈ ಸರ್ಕಾರ ಎಲ್ಲಾ ಕಾಲೇಜುಗಳ ಹಣವನ್ನು ಕ್ರೋಢಿಕರಿಸಿ ಕಾಲೇಜುಗಳಿಗೆ ಅಗತ್ಯ ಅಲಕರಣೆಗಳನ್ನು ನೀಡಲಾಗುತ್ತದೆ ಎನ್ನುವ ಆದೇಶ ಹೊರಡಿಸಿತ್ತು. 2 ವರ್ಷಗಳಾದರೂ ಯಾವುದೇ ಉಪಕರಣ ನೀಡಲಿಲ್ಲ. ಇದರಲ್ಲೂ ಕಮಿಷನ್ ಪಡೆಯುವ ಉದ್ದೇಶವಿದೆ’ ಎಂದು ಆರೋಪಿಸಿದರು.</p>.<p>‘ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದು ಆಯಾಯ ಕಾಲೇಜುಗಳ ಐಡಿಎಫ್ ನಿಧಿಯನ್ನು ಈ ಹಿಂದಿನ ನಿಯಮದಂತೆ ಆಯಾಯಾ ಕಾಲೆಜುಗಳಿಗೇ ಬಳಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಪ್ರಾಂಶುಪಾಲ ಶ್ರೀಧರ್, ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಮಂಜುಳಾ, ಎಇಇ ಪ್ರಮೋದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>