<p><strong>ಹೊಳೆನರಸೀಪುರ</strong>: ಎರಡೂ ಕಾಲಿಲ್ಲದ ಯುವಕನೊಬ್ಬನನ್ನು ತಾಲ್ಲೂಕಿನ ಗವಿಸೋಮನಹಳ್ಳಿಯ ದೇಗುಲದಲ್ಲಿ ಸೋಮವಾರ ಮದುವೆಯಾಗುವ ಮೂಲಕ ಯುವತಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಯುವಕ ಶ್ರೀಮಂತನಲ್ಲದಿದ್ದರೂ; ಯುವತಿ ಮದುವೆಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮದುವೆ ಹಲವರ ಹುಬ್ಬೇರಿಸಿದೆ.</p>.<p>ಗವಿಸೋಮನಹಳ್ಳಿಯ ವಿಶ್ವಕರ್ಮ ಜನಾಂಗದ ಕಾಳಮ್ಮ–ಗಂಗಾಧರಾಚಾರ್ ಪುತ್ರ ಜಿ.ಜಿ.ಸೋಮಾಚಾರ್ ಪುಟ್ಟಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.</p>.<p>ಶಾಂತಿಗ್ರಾಮ ಹೋಬಳಿಯ ಶಶಿಕಲಾ ಲೇಟ್ ನರಸಿಂಹಮೂರ್ತಿ ಪುತ್ರಿ ವೀಣಾ, ಸೋಮಾಚಾರ್ ಅವರನ್ನು ವರಿಸಿದ್ದಾರೆ.</p>.<p>‘ಎರಡೂ ಗ್ರಾಮದ ಹಿರಿಯರು, ಈ ಮದುವೆ ಬಗ್ಗೆ ಹುಡುಗ–ಹುಡುಗಿಯ ಅಭಿಪ್ರಾಯ ಕೇಳಿ, ಇಬ್ಬರ ಒಪ್ಪಿಗೆ ನಂತರವೇ ಮದುವೆ ಮಾಡಿಸಿದ್ದೇವೆ’ ಎಂದು ಗವಿಸೋಮನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದ ಅರ್ಚಕ ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಇವರಿಬ್ಬರ ಸಂಸಾರ ಜೀವನಕ್ಕಾಗಿ ಕೆಲಸವೊಂದನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ</strong>: ಎರಡೂ ಕಾಲಿಲ್ಲದ ಯುವಕನೊಬ್ಬನನ್ನು ತಾಲ್ಲೂಕಿನ ಗವಿಸೋಮನಹಳ್ಳಿಯ ದೇಗುಲದಲ್ಲಿ ಸೋಮವಾರ ಮದುವೆಯಾಗುವ ಮೂಲಕ ಯುವತಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಯುವಕ ಶ್ರೀಮಂತನಲ್ಲದಿದ್ದರೂ; ಯುವತಿ ಮದುವೆಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮದುವೆ ಹಲವರ ಹುಬ್ಬೇರಿಸಿದೆ.</p>.<p>ಗವಿಸೋಮನಹಳ್ಳಿಯ ವಿಶ್ವಕರ್ಮ ಜನಾಂಗದ ಕಾಳಮ್ಮ–ಗಂಗಾಧರಾಚಾರ್ ಪುತ್ರ ಜಿ.ಜಿ.ಸೋಮಾಚಾರ್ ಪುಟ್ಟಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.</p>.<p>ಶಾಂತಿಗ್ರಾಮ ಹೋಬಳಿಯ ಶಶಿಕಲಾ ಲೇಟ್ ನರಸಿಂಹಮೂರ್ತಿ ಪುತ್ರಿ ವೀಣಾ, ಸೋಮಾಚಾರ್ ಅವರನ್ನು ವರಿಸಿದ್ದಾರೆ.</p>.<p>‘ಎರಡೂ ಗ್ರಾಮದ ಹಿರಿಯರು, ಈ ಮದುವೆ ಬಗ್ಗೆ ಹುಡುಗ–ಹುಡುಗಿಯ ಅಭಿಪ್ರಾಯ ಕೇಳಿ, ಇಬ್ಬರ ಒಪ್ಪಿಗೆ ನಂತರವೇ ಮದುವೆ ಮಾಡಿಸಿದ್ದೇವೆ’ ಎಂದು ಗವಿಸೋಮನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದ ಅರ್ಚಕ ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಇವರಿಬ್ಬರ ಸಂಸಾರ ಜೀವನಕ್ಕಾಗಿ ಕೆಲಸವೊಂದನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>