ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಎರಡೂ ಕಾಲಿಲ್ಲದ ಬಡ ಯುವಕನನ್ನು ವರಿಸಿದ ಯುವತಿ

Last Updated 29 ನವೆಂಬರ್ 2022, 5:53 IST
ಅಕ್ಷರ ಗಾತ್ರ

ಹೊಳೆನರಸೀಪುರ: ಎರಡೂ ಕಾಲಿಲ್ಲದ ಯುವಕನೊಬ್ಬನನ್ನು ತಾಲ್ಲೂಕಿನ ಗವಿಸೋಮನಹಳ್ಳಿಯ ದೇಗುಲದಲ್ಲಿ ಸೋಮವಾರ ಮದುವೆಯಾಗುವ ಮೂಲಕ ಯುವತಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯುವಕ ಶ್ರೀಮಂತನಲ್ಲದಿದ್ದರೂ; ಯುವತಿ ಮದುವೆಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮದುವೆ ಹಲವರ ಹುಬ್ಬೇರಿಸಿದೆ.

ಗವಿಸೋಮನಹಳ್ಳಿಯ ವಿಶ್ವಕರ್ಮ ಜನಾಂಗದ ಕಾಳಮ್ಮ–ಗಂಗಾಧರಾಚಾರ್ ಪುತ್ರ ಜಿ.ಜಿ.ಸೋಮಾಚಾರ್ ಪುಟ್ಟಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

ಶಾಂತಿಗ್ರಾಮ ಹೋಬಳಿಯ ಶಶಿಕಲಾ ಲೇಟ್ ನರಸಿಂಹಮೂರ್ತಿ ಪುತ್ರಿ ವೀಣಾ, ಸೋಮಾಚಾರ್ ಅವರನ್ನು ವರಿಸಿದ್ದಾರೆ.

‘ಎರಡೂ ಗ್ರಾಮದ ಹಿರಿಯರು, ಈ ಮದುವೆ ಬಗ್ಗೆ ಹುಡುಗ–ಹುಡುಗಿಯ ಅಭಿಪ್ರಾಯ ಕೇಳಿ, ಇಬ್ಬರ ಒಪ್ಪಿಗೆ ನಂತರವೇ ಮದುವೆ ಮಾಡಿಸಿದ್ದೇವೆ’ ಎಂದು ಗವಿಸೋಮನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದ ಅರ್ಚಕ ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇವರಿಬ್ಬರ ಸಂಸಾರ ಜೀವನಕ್ಕಾಗಿ ಕೆಲಸವೊಂದನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT